
ಶಿವಮೊಗ್ಗ:ಮಂಚಿಕೊಪ್ಪದ ಹಕ್ಕಳ್ಳಿ ಎಂಬಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ 47 ಜಾನುವಾರುಗಳನ್ನು ಶಿರಾಳಕೊಪ್ಪ ಪೊಲೀಸರು ರಕ್ಷಿಸಿ, ಗೋಶಾಲೆಗೆ ಬಿಟ್ಟಿದ್ದಾರೆ. ಹಕ್ಕಳ್ಳಿ ಗ್ರಾಮದ ಮೌಲಾನಾ ಸಾಜಿದ್ ಆಲಿ ಎಂಬುವವರ ಮಾವಿನ ತೋಟದಲ್ಲಿ ವಧೆಗಾಗಿ ಕಟ್ಟಿದ್ದ ಎರಡು ಎಮ್ಮೆಗಳು ಸೇರಿದಂತೆ 47ಕ್ಕೂ ಹೆಚ್ಚು ಜಾನುವಾರುಗಳನ್ನು ಪಿ.ಎಸ್.ಐ ಪ್ರಶಾಂತ್ ಕುಮಾರ್ ಹಾಗೂ ಸಿಬ್ಬಂದಿ ರಕ್ಷಿಸಿದ್ದಾರೆ. 250 ಕೆ.ಜಿ. ಮಾಂಸ, 4 ವಾಹನಗಳು, ಆಯುಧ ಹಾಗೂ ತಕ್ಕಡಿಯನ್ನು ವಶಕ್ಕೆ ಪಡೆದಿದ್ದಾರೆ.

j3tvkannada
ಜೈನುಲ್ಲ, ಅಕ್ಬರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ಕಾರ್ತಿಕ್, ಬಂಗಾರಪ್ಪ, ಶಿವಶಂಕರ್ ಬಾರ್ಕಿ, ಪ್ರದೀಪ್, ಶಿವಮೂರ್ತಿ ಇನ್ನಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕೂಡ್ಲಿ ಗ್ರಾಮದಿಂದ ಹೊಳೆಹೊನ್ನೂರಿಗೆ ಬೈಕ್ ನಲ್ಲಿ ಸಾಗಿಸುತ್ತಿದ್ದ ಗೋ ಮಾಂಸ ಪತ್ತೆ ಮಾಡಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶೋಹಿಬ್, ಅಲ್ತಾಫ್ ಹಾಗೂ ಸೈಫ್ ಅಲಿ ಖಾನ್ ಬಂಧಿತರು. ಬೈಕ್ನಲ್ಲಿ ಗೋಮಾಂಸ ಸಾಗಿಸುತ್ತಿರುವಾಗ ದಾಳಿ ನಡೆಸಿ ಮನೆಯೊಂದರಿಂದ ಗೋಮಾಂಸ ತಂದಿದ್ದಾಗಿ ಗೊತ್ತಾಗಿತ್ತು. ಸೈಫ್ ಅಲಿ ಖಾನ್ ಮನೆ ಮೇಲೆ ದಾಳಿ ಮಾಡಿ 30 ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮಾದರಿಯನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.