
ಕೋಲಾರ : ತ್ಯಾಗ ಬಲಿದಾನದ ಸಂಕೇತವಾಗಿರುವ ಪವಿತ್ರ ಬಕ್ರೀದ್ ಹಬ್ಬದ ಪ್ರಯುಕ್ತ ಕೋಲಾರ ಪಟ್ಟಣದ ಪಂಚಾಯತ್ ಕಾರ್ಯಾಲಯದಲ್ಲಿ ವೀಳ್ಯದೆಲೆ ವಿನಿಮಯದ ಮೂಲಕ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

j3tvkannada
ಈ ಸಂದರ್ಭದಲ್ಲಿ ಹಿರಿಯರಾದ ಉಸ್ಮಾನಪಟೇಲ್ ಖಾನ್ ಮಾತನಾಡುತ್ತಾ ಕೋಲಾರ ಪಟ್ಟಣ ಭಾವಕ್ಯತೆಗೆ ಹೆಸರಾಗಿದೆ, ಪ್ರಮುಖ ಹಬ್ಬ ಹರಿದಿನಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಪರಸ್ಪರ ವೀಳ್ಯದೆಲೆ ವಿನಿಮಯದಂತಹ ವಿಶಿಷ್ಟ ಸಂಪ್ರದಾಯದ ಆಚರಣೆಯಿಂದ ಭಾತೃತ್ವ ಹಾಗೂ ಸಹೋದರತ್ವವನ್ನು ಸಾರುವ ಮೂಲಕ ಇತರರಿಗೆ ಮಾಧರಿಯಾಗಿ ನಿಂತಿದ್ದೇವೆ ಎಂದರು.
ವಿವಿಧತೆಯಲ್ಲಿ ಏಕತೆಯನ್ನು ಸಾರುವ ಮೂಲಕ ಜಾಗತಿಕ ಇತಿಹಾಸದಲ್ಲಿ ನಮ್ಮ ಭಾರತ ದೇಶದಂತಹ ರಾಷ್ಟ್ರ ಮತ್ತೊಂದಿಲ್ಲ ಇಂತಹ ಭವ್ಯ ಭಾರತದಲ್ಲಿ ಜನಿಸಿರುವ ನಾವುಗಳೇ ಪುಣ್ಯವಂತರು ಎಂದರು. ಪ್ರಸಕ್ತ ವರ್ಷ ಹಜ್ ಯಾತ್ರೆಗೆ ತೆರಳಿರುವ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಹಜ್ ಆಯೋಜಕರೊಂದಿಗೆ 146 ಕೋಟಿ ನಮ್ಮ ಭಾರತಿಯರ ಪರವಾಗಿ ನಾನು ಹಜ್ ಯಾತ್ರೆಗೆ ಆಗಮಿಸಿದ್ದೇನೆ ಎನ್ನುವ ಮೂಲಕ ಭಾರತ ದೇಶದ ಏಕತೆಯನ್ನು ಜಾಗತಿಕ ಮಟ್ಟದಲ್ಲಿ ಸಾರಿದ್ದಾರೆ ಎಂದರು.
ಪಟ್ಟಣದ ಪಂಚಾಯತ್ ಸದಸ್ಯ ಬಾಬು ಬಜಂತ್ರಿ ಮಾತನಾಡಿ ಪವಿತ್ರ ಬಕ್ರೀದ್ ಹಬ್ಬದ ದಿನದಂದು ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಹಿರಿಯರು ಇಲ್ಲಿ ಸೇರುವ ಮೂಲಕ ಏಕತೆಯ ಸಂದೇಶ ಸಾರುತ್ತಿದ್ದೆವೆ ಎಂದರು. ಇದರ ಜೊತೆಗೆ ಮುಂಚಿನಂತೆ ಈ ಸಂಪ್ರದಾಯದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಉಸ್ಮಾನಪಟೇಲ್ ಖಾನ್, ಬಿ.ಯು ಗಿಡ್ಡಪ್ಪಗೋಳ, ಆರ್.ಬಿ ಪಕಾಲಿ, ಮಹಮ್ಮದಸಾಬ ಹೊನ್ಯಾಳ, ಪಿ.ಕೆ ಗಿರಗಾವಿ, ಇಸ್ಮಾಯಿಲಸಾಬ ತಹಶೀಲ್ದಾರ್, ಮಹಾಂತೇಶ್ ಗಿಡಪ್ಪಗೋಳ, ಹನೀಪ ಮಕಾನದಾರ, ಬನಪ್ಪ ಬಾಲಗೊಂಡ, ಎಂ.ಆರ್ ಕಲಾದಗಿ, ಅನ್ವರ್ ಕಂಕರಪೀರ, ದಶರಥ ಈಟಿ, ದಸ್ತಗೀರ ಕಲಾದಗಿ, ಬಾಬು ಭಜಂತ್ರಿ ಸಹಿತ ಇನ್ನಿತರರು ಇದ್ದರು. ಎಂ.ಆರ್ ಕಲಾದಗಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.