
ಕಲಬುರುಗಿ: ತಾಲ್ಲೂಕಿನ ಕಬಿರಾಬಾದ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗಣಪತರಾವ್ ಪಂಚಾಳ ಅವರು ತಮ್ಮ ಸೇವೆಯಿಂದ ವಯೋನಿವೃತ್ತಿ ಹೊಂದಿರುವ ಪ್ರಯುಕ್ತ, ಅವರ ಗೆಳೆಯರ ಬಳಗದಿಂದ ಹಳ್ಳಿಖೇಡ ಭಾವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ, ಬಿಳ್ಕೋಡಲಾಯಿತು.

j3tvkannada
ಚಳಕಾಪುರ ಸಿದ್ದಾರೋಢ ಮಠದ ಶಂಕರನಂದ ಮಹಾಸ್ವಾಮಿ ಅವರು ದಿವ್ಯಸಾನಿಧ್ಯ ವಹಸಿ ಮಾತನಾಡಿ, ಭಾಲ್ಕಿ ತಾಲ್ಲೂಕಿನ ಪ್ರಸಿದ್ದ ಪುಣ್ಯ ಭೂಮಿಯಲ್ಲಿ ಸಂತರು ನೆಲೆಸಿದ ಚಾಳಕಾಪೂರ ಗ್ರಾಮದ ಪಂಚಾಳ (ವಿಶ್ವಕರ್ಮ) ಜನಾಂಗದ ಬಡ ಕುಟುಂಬದಲ್ಲಿ ಜನಿಸಿದ ಗಣಪತಿ ಪಂಚಾಳ ಇವರು ಬಡಿಗೆತನ ಕಾಯಕ ವೃತ್ತಿಯ ಕುಟುಂಬದ ಕಾಶೆಪ್ಪಾ ಮತ್ತು ಕಾಳಮ್ಮಾ ಅವರ ೩ನೇ ಮಗನಾಗಿ 1965ರಲ್ಲಿ ಜನ್ಮ ಪಡೆದ ಇವರು ಚಳಕಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ ಅಭ್ಯಾಸ ಮುಗಿಸಿ, 8ನೇ ತರಗತಿಯಿಂದ 10ನೇ ತರಗತಿವರೆಗೆ ಶ್ರೀ ಸಿದ್ದಾರೂಢ ಪ್ರೌಢ ಶಾಲೆ ಚಾಳಕಾಪೂರದಲ್ಲಿ ಅಭ್ಯಾಸ ಮುಗಿಸಿದ್ದಾರೆ. ಎಂದರು.
ಗಣಪತರಾವ್ ಪಂಚಾಳ ಅವರು ಬಾಲ್ಯದಿಂದ ಚುರುಕಾದ ವ್ಯಕ್ತಿ ನಾಟಕಗಾರ, ಕಲೆಗಾರ, ಜಾನಪದ ಸಂಗೀತ ಕಲಾವಿದರು, ಪುರಾಣ ಪ್ರವಚನಕಾರರು, ನಾಟಿ ವೈದ್ಯರು, ಸಾಹಿತಿ ರಚನಕಾರರು, ಶಿಕ್ಷಣ ಚಿಂತಕ ವೃತ್ತಿಯವರು, ಬಿ.ಶ್ಯಾಮ ಸುಂದರ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 8 ವರ್ಷಗಳ ಕಾಲ ಸಂಬಳವಿಲ್ಲದೆ ಸೇವೆ ಮಾಡಿರುತ್ತಾರೆ. ಗ್ರಾಮೀಣ ಬಡ ಮಕ್ಕಳಿಗೆ ಪ್ರೋತ್ಸಾಹದಾಯಕ ಸೇವಾ ಕಾರ್ಯ ಮಾಡಿರುತ್ತಾರೆ. ಎಂದರು. ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸೇವೆ ಮಾಡಿ ಎಲ್ಲರಿಗೂ ಮೆಚ್ಚಿಗೆಯುಳ್ಳವರಾಗಿದ್ದಾರೆ. ಇವರ ಸಮಯಪಾಲನೆ ಶಿಸ್ತು ಸಹಕಾರ ಮನೋಭಾವ, ಕರುಣಾಮಯಿ, ವಿಶಾಲ ಹೃದಯಯುಳ್ಳವರಾಗಿದ್ದು, ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಎಂದು ಬಣ್ಣಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗೂಡಾಳ ಅವರು ಮಾತನಾಡಿ, ಗಣಪತರಾವ್ ಪಂಚಾಳ ಅವರು ಕಬಿರಾಬಾದ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ಇವರು ಸರಳ, ಸಜ್ಜನಿಕೆಯ ಮತ್ತು ಮಕ್ಕಳ ಅಚ್ಚು ಮೇಚ್ಚಿನ ಶಿಕ್ಷಕರಲ್ಲಿ ಒಬ್ಬರಾಗಿದ್ದಾರೆ, ಎಂದು ತಿಳಿಸಿದರು. ಗಣಪತರಾವ್ ಪಂಚಾಳ ಅವರು ಈಗಾಗಲೇ ಅಲ್ಲೂರು ಸೇರಿದಂತೆ ಕಬಿರಾಬಾದ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು ವರ್ಷಗಳ ಕಾಲ ಪಾರದರ್ಶಕವಾಗಿ ಸೇವೆ ಸಲ್ಲಿಸಿದ್ದಾರೆ, ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ತಾತ್ಯಾರಾವ ಕಾಂಬಳೆ ಅವರು ಮಾತನಾಡಿ, ಶಿಕ್ಷಕರ ವೃತ್ತಿಯನ್ನು ಈ ಜಗತ್ತಿನಲ್ಲಿ ಅತ್ಯತ್ತಮ ಮತ್ತು ಆದರ್ಶ ವೃತ್ತಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಶಿಕ್ಷಕರು ನಿಸ್ವಾರ್ಥವಾಗಿ ಒಬ್ಬರ ಜೀವನವನ್ನು ರೂಪಿಸುವಲ್ಲಿ ತಮ್ಮ ಸೇವೆಯನ್ನು ನೀಡುತ್ತಾರೆ ಅವರ ಸಮರ್ಪಿತ ಕೆಲಸವನ್ನು ಬೇರೆ ಯಾವುದೇ ಕೆಲಸದೊಂದಿಗೆ ಹೋಲಿಸಲಾಗುವುದಿಲ್ಲ ಅದೆ ತರಹ ಗಣಪತರಾವ್ ಪಂಚಾಳರವರು ಕಬಿರಾಬಾದ್ ಗ್ರಾಮದಲ್ಲಿ ಕಾರ್ಯನಿರ್ವಹಿಸಿದ್ದಾರೆ ಎನ್ನುವುದಕ್ಕೆ ಇವತ್ತಿನ ಅವರ ಬೀಳ್ಕೊಡುಗೆ ಸಮಾರಂಭಕ್ಕೆ ಆಗಮಿಸಿದ ಜನರೆ ಸಾಕ್ಷಿ ಎಂದು ಗೂಣಗಾನ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ ಮಾಲಿಪಾಟೀಲ ಅವರು ಮಾತನಾಡಿ, ಶಿಕ್ಷಕ ಗಣಪತರಾವ್ ಪಂಚಾಳ ರವರು ಒಬ್ಬ ಅದ್ಭುತ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಒಬ್ಬ ಶಿಕ್ಷಕ ತನ್ನ ಜ್ಞಾನ, ತಾಳ್ಮೆ, ಪ್ರೀತಿ ಮತ್ತು ಕಾಳಜಿಯಿಂದ ವಿದ್ಯಾರ್ಥಿಗಳ ಜೀವನಕ್ಕೆ ಬಲವಾದ ಅಕಾರವನ್ನು ನೀಡುವಂತಹ ಪ್ರಮುಖ ವ್ಯಕ್ತಿಯೆ ಶಿಕ್ಷಕ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಿಂಗರಾಜ ಅರಸ್, ಪಶೂಸಂಗೋಪಾನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಮಹಾವೀರ ಜಮಖಂಡಿ, ಪ್ರಮುಖರಾದ ಮುರುಗೇಂದ್ರ ಸಜ್ಜನಶೇಟ್ಟಿ, ತಾತ್ಯರಾವ್ ಕಾಂಬಳೆ, ಶಿವರಾಜ ಮೇತ್ರೆ, ಮಡೇಪ್ಪಾ ಕುಂಬಾರ, ಶ್ರೀಧರ್ ಚಹ್ವಾಣ, ಈರಣ್ಣ ಕುಂಬಾರ, ಗುರುಲಿಂಗಯ್ಯಾ ಹಾಲಾ, ಹಾಸ್ಯ ಕಲಾವಿದ ಪ್ರಕಾಶ ಕುಲಕರ್ಣಿ, ಬಸವರಾಜ ಬಡಗೇರ್ ಬೆಂಗಳೂರ, ಪ್ರಭಾಕರ್ ಪಂಚಾಳ, ಇದ್ದರು. ಮಲ್ಲಪ್ಪಾ ಜೀಗಜಿಣಗಿ ನಿರೂಪಿಸಿದರು. ನಿವೃತ್ತ ಶಿಕ್ಷಕ ಗಣಪತರಾವ್ ಪಂಚಾಳ ಪ್ರಾಸ್ತವಿಕ ಮಾತನಾಡಿ, ಸ್ವಾಗತಿಸಿ, ವಂದಿಸಿದರು.