
ಕೊಪ್ಪಳ: ಇಸ್ಪಿಟ್, ಕುಡಿತ, ಜೂಜಾಟದಂತಹ ಚಟಗಳನ್ನು ಮಾಡುವವರನ್ನು ಸರಿದಾರಿಗೆ ತರುವ ಹಿನ್ನೆಲೆಯ ಸದ್ಭಾವನಾ ಯಾತ್ರೆ ಮಾಡುವ ಆಲೋಚನೆ ಇದೆ. ಆದ್ದರಿಂದ ಪಟ್ಟಣದ ಸರ್ವ ಸಮುದಾಯದವರು ಸಹಕಾರ ಮತ್ತು ಸದ್ಗುಣದ ಮೂಲಕ ಯಶಸ್ವಿಗೊಳಿಸಬೇಕಿದೆ. ಆದ್ದರಿಂದ ಯಾವ ರೀತಿ ಕಾರ್ಯಕ್ರಮ ಮಾಡಬೇಕು. ಯಾವ ದಿನದಿಂದ ಪ್ರಾರಂಭ ಮಾಡಬೇಕು ಎಂದು ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

j3tvkannada
ಸ್ಥಳೀಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಸದ್ಭಾವನಾ ಯಾತ್ರೆ ಪೂರ್ವಭಾವಿ ಸಭೆಯ ಸಾನ್ನಿಥ್ಯವಹಿಸಿ ಅವರು ಮಾತನಾಡಿದರು. ಪ್ರತಿ ನಿತ್ಯ ಸಂಜೆ ಆಥ್ಯಾತ್ಮಿಕ ಪ್ರವಚನ ಬೆಳಿಗ್ಗೆ ಮನೆಮನೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಕನಷ್ಠ ೨೧ ದಿನಗಳು ಬೇಕಾಗುವುದು. ಆದ್ದರಿಂದ ಇಂತಹ ವಿಶೇಷ ಯಾತ್ರೆಗೆ ಪ್ರಮುಖರು ಸಮಿತಿಗಳನ್ನು ಮಾಡಿಕೊಂಡು ಯಶಸ್ವಿಗೊಳಿಸಬೇಕು ಎಂದರು.
ನಂತರ ಪ್ರಮುಖರಾದ ಶ್ಯಾಮೀದಸಾಬ ದೋಟಿಹಾಳ ಮಾತನಾಡಿದರು. ಜುಲೈ ೧೧ ರ ನಂತರ ಯಾತ್ರೆ ಮತ್ತು ಪ್ರವಚನ ಕಾರ್ಯಕ್ರಮ ಮಾಡಲು ಸೂಕ್ತ ಸಮಯ. ಆದ್ದರಿಂದ ಮತ್ತೂಮ್ಮೆ ಜುನ್.೮ ರಂದು ಪೂರ್ವಭಾವಿ ಈ ಸಭೆ ಕರೆಯಲು ತೀರ್ಮಾನಸಲಾಯಿತು. ಸಭೆಯಲ್ಲಿ ವಿವಿಧ ಸಮಾಜದ ಪ್ರಮುಖರು, ಯುವಕರು ಇದ್ದರು.