
ಬೆಳ್ತಂಗಡಿ: ನೇತ್ರಾವತಿ ಶಿಖರದ, ಕೆಳಗಿನ ಪ್ರದೇಶದಲ್ಲಿ ಆವರಿಸಿರುವ ಬೃಹತ್ ಕಾಡ್ಗಿಚ್ಚು, ಕಳೆದ ಎರಡು ಮೂರು ದಿನಗಳಿಂದ ಸಾವಿರಾರು ಎಕರೆಗಳನ್ನು ಆವರಿಸಿಕೊಂಡಿದೆ. ದಿಡುಪೆಯ ಗೋಡೌನ್ ಬೆಟ್ಟದ ಬಳಿ ಆಕಸ್ಮಿಕವಾಗಿ ಪ್ರಾರಂಭವಾದ ಬೆಂಕಿ.. ಶುಷ್ಕ ಹವಾಮಾನದಿಂದಾಗಿ ವೇಗವಾಗಿ ಹರಡಿ, ಸಸ್ಯವರ್ಗವನ್ನು ನಾಶಪಡಿಸಿದೆ. ಮತ್ತು ಹತ್ತಿರದ ಮನೆಗಳಿಗೆ ಅಪಾಯವನ್ನುಂಟುಮಾಡಿದೆ.

ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ಎರಡು ಅಗ್ನಿಶಾಮಕ ವಾಹನಗಳು ʼಫಿಟ್ನೆಸ್ʼ ಪ್ರಮಾಣಪತ್ರಗಳ ಅವಧಿ ಮುಗಿದು, ಕಾರ್ಯನಿರ್ವಹಿಸದ ಕಾರಣ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಅಗ್ನಿಶಾಮಕ ವಾಹನಗಳು ಲಭ್ಯವಿಲ್ಲದ ಕಾರಣ, ಕಾಡ್ಗಿಚ್ಚು ಸಾವಿರಾರು ಎಕರೆ ವ್ಯಾಪಿಸಿದೆ. ಹಾಗೂ ಅಪಾರ ಹಾನಿಯನ್ನುಂಟು ಮಾಡಿದೆ.