
ಕಲಬುರಗಿ: ಕಲಬುರಗಿ ವಿಭಾಗೀಯ ಕೇಂದ್ರದ ಬೇಡಿಕೆ ನ್ಯಾಯಸಮ್ಮತವಾಗಿದ್ದು ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದರು. ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೆ ಕೇಂದ್ರದ ರೈಲ್ವೆ ಸಚಿವರಾಗಿದ್ದ ಡಾ.ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ರೈಲ್ವೆ ವಿಭಾಗ ಘೋಷಣೆ ಮಾಡಿದ್ದರು. ನಂತರ ಕಾರ್ಯ ಸಾಧ್ಯತೆ ಇಲ್ಲದಕ್ಕಾಗಿ ಅದು ಅನುಷ್ಠಾನಕ್ಕೆ ಬಂದಿಲ್ಲ. ಈ ಬಗ್ಗೆ ಖರ್ಗೆ ಅವರೊಂದಿಗೆ ಮಾಹಿತಿ ಹಂಚಿಕೊಂಡಿದ್ದೇನೆ ಎಂದರು.

j3tvkannada
ಜಮ್ಮು ಡಿವಿಷನ್ ಮಾಡಿದ್ದೀರಿ ಕಲಬುರಗಿ ಮಾಡಲಿಲ್ಲ ಎಂಬ ಪ್ರಶ್ನೆಗೆ ಜಮ್ಮುವನ್ನು ನೀವು ಕಲಬುರಗಿಗೆ ಹೋಲಿಕೆ ಮಾಡಬೇಡಿ. ಜಮ್ಮುನೇ ಬೇರೆ ಕಲಬುರಗಿನೇ ಬೇರೆ ಎಂದರು. ಕಲಬುರಗಿ ಡಿವಿಷನ್ ಆಗಬೇಕು ಎಂಬ ಆಸೆ ನನಗೂ ಇದೆ ಎಂದರು. ಮುಂಬೈ-ಸೋಲಾಪೂರ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಕಲಬುರಗಿ ವರೆಗೂ ವಿಸ್ತರಣೆ ಮಾಡಬೇಕೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ವಿ.ಸೋಮಣ್ಣ ಈ ಕುರಿತು ಪ್ರಕ್ರಿಯೆ ನಡೆದಿದೆ ಎಂದರು. ಹೈದರಾಬಾದ್- ಚಿತ್ತಾಪುರ ಪ್ಯಾಸೆಂಜರ್ ರೈಲು ಕಲಬುರಗಿ ವರೆಗೆ ವಿಸ್ತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

j3tvkannada
ಸಾಮಾನ್ಯ ಜನರಿಗೆ ತುಂಬಾ ಅನುಕೂಲವಾಗಿದ್ದ ಗುಂತಕಲ್-ಸೋಲಾಪುರ ಪ್ಯಾಸೆಂಜರ್ ರೈಲು ಕೋವಿಡ್ ನಂತರ ಬಂದ್ ಆದ ಬಗ್ಗೆ ಮಾಧ್ಯಮಗಳು ಅಧಿಕಾರಿಗಳ ಗಮನಕ್ಕೆ ತಂದು, ಈ ಬಗ್ಗೆ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಕಲಬುರಗಿ-ಬೆಂಗಳೂರು ಮತ್ತು ಬೀದರ-ದೆಹಲಿ ನಡುವೆ ಸ್ಲೀಪರ್ ರೈಲು, ಹೈದರಾಬಾದ್ -ಬೀದರ-ಕಲಬುರಗಿ, ಬೆಂಗಳೂರು-ಮಂಗಳೂರು ಹಾಗೂ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲಿಗೆ ಬೇಡಿಕೆ ಇದ್ದು, ಶೀಘ್ರವೇ ಕೇಂದ್ರದ ರೈಲ್ವೆ ಸಚಿವರು ಮತ್ತು ರೈಲ್ವೆ ಬೋರ್ಡ್ ಅಧ್ಯಕ್ಷರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

j3tvkannada
ಕಲಬುರಗಿ-ಬೆಂಗಳೂರು ನಡುವೆ ಇನ್ನೊಂದು ಟ್ರೇನ್ ಅವಶ್ಯವಿದೆ ಎಂಬ ವಿಷಯ ಗಮನಕ್ಕೆ ಬಂದಿದೆ. 20 ದಿನಗಳಲ್ಲಿಸಭೆ ಕರೆದಿದ್ದೇನೆ. ಅಲ್ಲಿ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು. ತಾಂಡೂರ್ ಸಿಮೆಂಟ್ ಕ್ಲಸ್ಟರ್ ಮಾಡುವ ಬಗ್ಗೆ ಫೈನಲ್ ಆಗಿದೆ. ಸರ್ವೇ ಕಾರ್ಯ ನಡೆಯುತ್ತಿದೆ. ಚಿಂಚೋಳಿ ಮೂಲಕ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಶನಿವಾರ ಸಿಕಂದ್ರಾಬಾದ-ಬೀದರ ನಡುವೆ ರೈಲಿನ ಮೂಲಕವೇ ಸಂಚಾರ ಮಾಡಿ ಈ ಮಾರ್ಗದಲ್ಲಿ ಬರುವ ಲೇವೆಲ್ ಕ್ರಾಸಿಂಗ್ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದು, ಸುಮಾರು 28 ಕಡೆ ರೈಲ್ವೆ ರಸ್ತೆ ಮೇಲ್ಸೇತುವೆ, ರೈಲ್ವೆ ರಸ್ತೆ ಕೆಳಸೇತುವೆ ನಿರ್ಮಾಣಕ್ಕೆ ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್ನು ಮುಂದೆ ಆರ್ಒಬಿ, ಆರ್ಯುಬಿ ಕಾಮಗಾರಿಗಳನ್ನು ಸಂಪೂರ್ಣವಾಗಿ ರೈಲ್ವೆ ಇಲಾಖೆಯಿಂದ ಅನುದಾನ ನೀಡಿ ನಿರ್ಮಿಸಲು ಮಹತ್ವದ ನಿರ್ಧಾರ ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಎಂದರು. ಕಲಬುರಗಿ-ಬೆಂಗಳೂರು ನಡುವೆ ಪ್ರಯಾಣಿಕರ ಓಡಾಟ ಹೆಚ್ಚಿರುವುದರಿಂದ ಟಿಕೆಟ್ ಬುಕ್ ಮಾಡಬೇಕಾದರೆ ಹೊಟಗಿ ನಿಲ್ದಾಣ ಬೋರ್ಡಿಂಗ್ ಎಂದು ಆಯ್ದುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದಾಗ ಕೋಟಾ ಹೆಚ್ಚಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.