
ಬಾಗಲಕೋಟೆ: ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶಾದ್ಯಂತ ಕೊರೊನಾ ಹಾವಳಿ ಹೆಚ್ಚಾಗಿದೆ. ಈ ಮಧ್ಯೆ ಕೆಲ ಕಡೆಗಳಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ. ಈಗಾಗಲೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗ್ತಿದ್ದಂತೆ ಸರ್ಕಾರ ಅಲರ್ಟ್ ಆಗಿದೆ. ಜನರಿಗೆ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ನೀಡುತ್ತಿದೆ. ಈ ಮಧ್ಯೆ ಇಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ.

j3tvkannada
ಬಾಗಲಕೋಟೆ ಜಿಲ್ಲೆಗೆ ಈಗಾಗಲೇ ಆಫ್ರಿಕನ್ ಹಂದಿ ಜ್ವರ ಕಾಲಿಟ್ಟಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೋರಬಾಳ ಗ್ರಾಮದ ಎರಡು ಹಂದಿ ಫಾರ್ಮ್ ನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. ಎರಡು ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಈಗಾಗಲೇ ಸೋಂಕು ದೃಢವಾಗಿದೆ.
ಈ ಹಿನ್ನಲೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹಂದಿಗಳ ವಧೆಗೆ ಆದೇಶ ನೀಡಿದ್ದಾರೆ. ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡ ಗೋರಬಾಳ ಸುತ್ತಲಿನ 1 ಕಿ.ಮೀ ರೋಗ ಪೀಡಿತ ವಲಯ ಎಂದು ಘೋಷಣೆ ಮಾಡಲಾಗಿದೆ. ಇದು ಮತ್ತಷ್ಟು ಹರಡುವ ಭೀತಿಯಲ್ಲಿ ಫಾರ್ಮ್ ನಲ್ಲಿರುವ ಎಲ್ಲಾ ಹಂದಿಗಳನ್ನು ವಧೆ ಮಾಡುವಂತೆ ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದಾರೆ. ಇನ್ನೂ ಈ ಗೋರಬಾಳ ಸುತ್ತಲಿನ ರೋಗ ಪೀಡಿತ ವಲಯ ಎಂದು ಘೋಷಣೆ ಮಾಡಿದ ಸ್ಥಳಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಜನರ ಓಡಾಟವನ್ನು ನಿಷೇಧಿಸಲಾಗಿದೆ. ಜೊತೆಗೆ ಹಂದಿ ಮಾಂಸ ಮಾರಾಟ ಮತ್ತು ಸಾಗಾಟವನ್ನು ಕೂಡ ಸ್ಥಗಿತ ಮಾಡಲಾಗಿದೆ.
ಎರಡೂ ಫಾರ್ಮ್ನ ಹಂದಿಗಳ ವಧೆಗೆ ಸೂಚನೆ:-
ಈ ಆಫ್ರಿಕನ್ ಹಂದಿ ಜ್ವರ ರೋಗ ಹರಡದಂತೆ ತಡೆಯಲು ಈಗಾಗಲೇ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಹಂದಿಗಳ ವಧೆಗೆ ಆದೇಶ ನೀಡಿದ್ದಾರೆ. ಎರಡೂ ಪಾರ್ಮ್ ಗಳಲ್ಲಿನ 44 ಹಂದಿಗಳ ವಧೆ ಮಾಡಲು ಆದೇಶ ನೀಡಲಾಗಿದೆ. ಇಂಜೆಕ್ಷನ್ ನೀಡಿ ಹತ್ಯೆ ನಂತರ ರೋಗ ಹರಡದಂತೆ ರಾಸಾಯನಿಕ ಹಾಕಿ ಎಂದು ಸೂಚನೆ ನೀಡಿದ್ದಾರೆ. ನಂತರ ಹಂದಿಗಳನ್ನು 15 ಅಡಿ ತಗ್ಗು ಗುಂಡಿ ತೋಡಿ ಹೂತು ಹಾಕಲು ಹೇಳಿದ್ದಾರೆ.
ಜಿಲ್ಲಾಧಿಕಾರಿ ಆದೇಶದಂತೆ ಪಶುಸಂಗೋಪನೆ ಇಲಾಖೆ ಹಾಗೂ ಆಸ್ಪತ್ರೆ ವೈದ್ಯರು ಹಂದಿಗಳನ್ನು ವಧೆ ಮಾಡಿ ಆಳವಾದ ಗುಂಡಿ ತೋಡಿ ಹೂತಾಕಿದ್ದಾರೆ. ಆಫ್ರಿಕನ್ ಹಂದಿ ಜ್ವರವನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.