
ರಾಯಚೂರು: ನಗರದಲ್ಲಿ ಹಲವು ವರ್ಷಗಳಿಂದ ಸ್ವಚ್ಚತೆಯನ್ನೇ ಕಾಣದ ಚರಂಡಿ ಮತ್ತು ರಾಜಕಾಲುವೆಗಳಲ್ಲಿ ಹೂಳು ತುಂಬಿ ಗಬ್ಬು ನಾರುತ್ತಿದ್ದು, ಜನ ಸಾಮಾನ್ಯರು ಮೂಗು ಮುಚ್ಚಿಕೊಂಡೇ ಓಡಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಈ ವರ್ಷವಂತೂ ಈಗಾಗಲೇ ಜೋರಾಗಿ ಮಳೆ ಸುರಿದಿರುವುದರಿಂದ ಚರಂಡಿಯಲ್ಲಿ ಹೊಲಸು ತುಂಬಿ ಸೊಳ್ಳೆಗಳ ಕಾಟದಿಂದಾಗಿ ಹಲವಾರು ರೋಗಗಳಿಗೆ ಆಶ್ರಯ ತಾಣವಾದಂತೆ ಭಾಸವಾಗುತ್ತಿತ್ತು. ಇದೀಗ ಚರಂಡಿಯನ್ನು ಸ್ವಚ್ಚಗೊಳಿಸಲು ಪೌರಕಾರ್ಮಿಕರು ಮುಂದಾಗಿದ್ದಾರೆ.

j3tvkannada.in
ಜೆಸಿಬಿ, ಹಿಟಾಚಿ ಜೊತೆಗೆ ಸುಮಾರು 60 ಜನ ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ. ಚರಂಡಿಯ ಸುತ್ತಲೂ ಬೆಳೆದು ನಿಂತಿದ್ದ ಗಿಡಗಂಟಿಗಳನ್ನೂ ತ್ಯಾಜ್ಯ ವಸ್ತುಗಳನ್ನೂ ಬೇರೆಡೆ ಸಾಗಿಸಿ ಸ್ವಚ್ಚತೆಯ ಕಾರ್ಯವನ್ನು ಮಾಡಿದ್ದಾರೆ. rರಾಜಕಾಲುವೆಯ ನೀರು ಸುತ್ತಮುತ್ತಲಿನ ಬಡಾವಣೆಗಳಿಗೆ ನುಗ್ಗಿ ಅವಾಂತರವೇ ಸೃಷ್ಟಿಯಾಗುತ್ತಿತ್ತು. ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಈ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಮತ್ತು ಪೌರ ಕಾರ್ಮಿಕರು ಕಾಲುವೆಗಳನ್ನು ಶುಚಿಗೊಳಿಸಿದ್ದಾರೆ. ನಗರದ ಸಿಯಾತಲಾಬ್ ವಾರ್ಡ್ ನಂಬರ್ 30,31,ಅರಬ್ ಮೊಹಲ್ಲಾ, ಮಡ್ಡಿಪೇಟೆ, ದೇವಿನಗರ ವಾರ್ಡ್ ನಂಬರ್ 21, ಹರಿಜನವಾಡ19, 20, ಮಕ್ತಲ್ ವಾರ್ಡ್ ನಂಬರ್ 25, ಬಂಗಿಕುಂಟಾ ವಾರ್ಡ್ ನಂಬರ್ 26 ಮುಂತಾದ ಪ್ರದೇಶಗಳನ್ನು ಸ್ವಚ್ಚಗೊಳಿಸಿದ್ದಾರೆ.