
ತುಮಕೂರು: ಪತ್ನಿ ಸಾವಿನ ದುಃಖದಲ್ಲೇ ಮನನೊಂದಿದ್ದ ಪತಿಯೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಂಗನಹಳ್ಳಿ ಗ್ರಾಮದ ನಿವಾಸಿ ವರದರಾಜು (53) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

j3tvkannada
ಚೌಡೇಶ್ವರಿ ದೇವಸ್ಥಾನದ ಅರ್ಚಕರಾಗಿದ್ದ ವರದರಾಜು ಅವರ ಪತ್ನಿ 8 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಗುಂಗಿನಲ್ಲೇ ಇವರು ಕಾಲ ಕಳೆಯುತ್ತಿದ್ದರು. ಇತ್ತೀಚೆಗೆ ಆಕೆಯ ನೆನಪು ಹೆಚ್ಚಾಗಿ ಕಾಡುತ್ತಿದ್ದು, ಅವಳಿಲ್ಲದ ಜೀವನ ನನಗೇಕೆ ಎಂದು ದೇವಸ್ಥಾನದ ಹಿಂಭಾಗದಲ್ಲೇ ಇರುವ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ಸಾವಿನಿಂದ ಕುಗ್ಗಿ ಹೋಗಿದ್ದ ವರದರಾಜು ಅವರ ತಂದೆ, ತಾಯಿ, ಸ್ನೇಹಿತರು ಸೇರಿದಂತೆ ಸಂಬಂಧಿಕರು ಹಲವು ಬಾರಿ ಮದುವೆಯಾಗಲು ಓಲೈಕೆ ಮಾಡಿದರಾದರೂ ಒಪ್ಪದ ವರದರಾಜು ಹೆಂಡತಿಯ ನೆನಪಿನಲ್ಲಿಯೇ ಮಂಕಾಗಿದ್ದರು, ವರದರಾಜುವಿಗೆ ಹಲವು ಬಾರಿ ಬುದ್ದಿವಾದ ಹೇಳಿದರೂ ಪ್ರಯೋಜನವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿ.ಪಿ.ಐ ಅನಿಲ್ ಹಾಗೂ ಪಿ.ಎ.ಸ್ಐ ಅಭಿಷೇಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.