

j3tvkannada
ಕಲಬುರಗಿ: ಮನೆ ಬೀಗ ಮುರಿದು 5.72 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಹೀರಾಪುರ ಕ್ರಾಸ್ನ ಜಿ.ಡಿ.ಎ ಲೇಔಟ್ನಲ್ಲಿ ನಡೆದಿದೆ. ವಿಜಯಲಕ್ಷ್ಮೀ ಬಾಗವಾಲೇ ಎಂಬುವವರ ಮನೆಯ ಬೀಗ ಮುರಿದು ಕಳ್ಳರು ಕಳ್ಳತನ ಮಾಡಿದ್ದಾರೆ.
50 ಸಾವಿರ ರೂ.ನಗದು, 50 ಗ್ರಾಂ ಬೆಳ್ಳಿಯ ಲಕ್ಷ್ಮೀ ಮೂರ್ತಿ, 100 ಗ್ರಾಂ.ನ 2 ಜೊತೆ ಕಾಲು ಚೈನು, 20 ಗ್ರಾಂ.ನ 2 ಬೆಳ್ಳಿ ಉಂಗುರ, 8 ಸಾವಿರ ರೂ.ಮೌಲ್ಯದ 30 ಗ್ರಾಂ.ನ ಶಿವಲಿಂಗ ಮೂರ್ತಿ, 100 ಗ್ರಾಂ ಹಾಲಗಡಗ ಸೇರಿ 30 ಸಾವಿರ ರೂ ಮೌಲ್ಯದ 300 ಗ್ರಾಂ ಬೆಳ್ಳಿ ಸಾಮಾನುಗಳು, ಚೈನ್, ಉಂಗುರ, ಬ್ರಾಸ್ಲೇಟ್, ಮುಗಿನ ನತ್ತು, ಮಂಗಳಸೂತ್ರ ಸೇರಿ 3.88 ಲಕ್ಷ ರೂ.ಮೌಲ್ಯದ ಬಂಗಾರದ ಆಭರಣ ಹಾಗೂ ತಾಯಿ ಅಂಬವ್ವ ಅವರ ಅಲಮಾರದಲ್ಲಿದ್ದ 1.84 ಲಕ್ಷ ರೂ.ಮೌಲ್ಯದ 46 ಗ್ರಾಂ ಬಂಗಾರದ ಆಭರಣ ಸೇರಿ 5.72 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ನಡೆದಿದೆ.