
ಬೆಂಗಳೂರು ಗ್ರಾಮಾಂತರ: ಹಸಿದಾಗ ಹಲಸು, ಉಂಡಾಗ ಮಾವು ಎಂಬುದು ವಾಡಿಕೆ. ಹಣ್ಣುಗಳ ರಾಜ ಮಾವು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದ್ದರೆ, ಇತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲಸಿನ ರಾಶಿ ಗ್ರಾಹಕರನ್ನು ಕೈಬೀಸಿ ಕರೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ೪೮ರ ದಾಬಸ್ಪೇಟೆ ಬಳಿಯ ರಾಯರಪಾಳ್ಯ, ಲಕ್ಕೂರು, ಹೊಸ ನಿಜಗಲ್ ಸೇರಿದಂತೆ ರಸ್ತೆಯ ಇಕ್ಕೆಲ್ಲಗಳಲ್ಲಿ ಹಲಸಿನ ಹಣ್ಣಿನ ಮಾರಾಟ ಜೋರಾಗಿದೆ. ಚಂದ್ರ ಹಲಸು, ಬಿಳಿ ಹಲಸು, ನೀರು ತೋಳೆ, ಬಿಳಿ, ಹಳದಿ ತೋಳೆ ಹಣ್ಣು ಹೀಗೆ ಪ್ರದೇಶವಾರು ವಿವಿಧ ತಳಿಯ ಹಣ್ಣುಗಳು ಕಂಡು ಬರುತ್ತಿವೆ.

j3tvkannada
ವಾರಾಂತ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಮಾರಾಟಗಾರರು. ಗುರುವಾರದಿಂದ ಭಾನುವಾರದವರೆಗೆ ನಾಲ್ಕೇ ದಿನದಲ್ಲಿ ಸುಮಾರು ೧೦೦-೧೫೦ ಹಲಸಿನ ಹಣ್ಣು ಮಾರಾಟವಾಗಿದೆ. ಮೇ, ಜೂನ್, ಜುಲೈ ೩ ತಿಂಗಳಲ್ಲಿ ಉತ್ತಮ ಸ್ಪಂದನೆಯಿದ್ದು, ಹಲಸಿನ ಹಣ್ಣಿನ ಗಾತ್ರದ ಮೇಲೆ ೫೦೦ ರೂ.ವರೆಗೆ ಮಾರಾಟವಾಗುತ್ತದೆ. ಸ್ಥಳೀಯವಾಗಿ ಹಾಗೂ ಕೆಲವೊಮ್ಮೆ ತಮಿಳುನಾಡಿನಿಂದ ಹಲಸಿನ ಹಣ್ಣು ತರುತ್ತೇವೆ ಎನ್ನುತ್ತಾರೆ ಮಾರಾಟಗಾರರು.
ಹಲಸಿನ ಹಣ್ಣಿನಲ್ಲಿ ಔಷಧೀಯ ಗುಣಗಳಿವೆ. ೧೦-೧೨ ಮೀಟರ್ ಎತ್ತರಕ್ಕೆ ಬೆಳೆಯುವ ಹಲಸಿನ ಮರ, ಹಸಿರು ಎಲೆಗಳಿಂದ ಆವೃತವಾಗಿರುತ್ತವೆ. ಹಣ್ಣಿನಲ್ಲಿ ವಿಟಮಿನ್ಗಳು, ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್, ಕ್ಯಾಲ್ಷಿಯಮ್, ಪೊಟಾಷಿಯಂ ಅಂಶಗಳು ಅಡಕವಾಗಿರುತ್ತದೆ. ಹಸಿದಾಗ ಹಲಸಿನ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ವೈದ್ಯರು.

j3tvkannada
ಸ್ಥಳೀಯವಾಗಿ ಮತ್ತು ಹೊರ ರಾಜ್ಯಗಳಿಂದ ಸಗಟು ದರದಲ್ಲಿಹಲಸು ಖರೀದಿಸುತ್ತೇವೆ, ಈ ಬಾರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಉತ್ತಮ ವ್ಯಾಪಾರ ನಡೆಯುತ್ತಿದೆ. ವಾರಾಂತ್ಯದಲ್ಲಿ ಬೆಂಗಳೂರಿನ ಜನರು ಖರೀದಿಗೆ ಹೆಚ್ಚು ಮುಗಿ ಬೀಳುತ್ತಾರೆ. ಪ್ರೇಕ್ಷಣೀಯ ಸ್ಥಳ ಹಾಗೂ ಪ್ರವಾಸಕ್ಕೆ ತುಮಕೂರಿನ ಭಾಗದಿಂದ ಬೆಂಗಳೂರಿಗೆ ತೆರಳುವಾಗ, ದಾಬಸ್ಪೇಟೆಯ ಹೆದ್ದಾರಿ ಅಕ್ಕಪಕ್ಕ ಹಲಸಿನ ಹಣ್ಣು ಖರೀದಿಸಿ ಬೆಂಗಳೂರಿಗೆ ತೆರಳುತ್ತೇವೆ ಎಂದು ಹೇಳುತ್ತಾರೆ ಹಲಸಿನ ವ್ಯಾಪಾರಿಗಳು.
ಹಲಸಿನ ಹಣ್ಣು ಆರೋಗ್ಯಕ್ಕೆ ಬಲು ಉಪಕಾರಿ ಹಾಗೂ ಅದರ ಪ್ರಯೋಜನಗಳು ಹಲವು. ಅದರಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ಮೆಗ್ನೇಷಿಯಂ, ಪೊಟ್ಯಾಷಿಯಂ ಇತ್ಯಾದಿ ಖನಿಜಗಳಿವೆ. ಇದನ್ನು ಸೇವಿಸಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಬಲ್ಲದು. ಅಲ್ಲದೆ, ಕ್ಯಾನ್ಸರ್ ತಡೆಗಟ್ಟುವಿಕೆ, ಹೃದ್ರೋಗ ತಡೆಗಟ್ಟುವಿಕೆ ಇತ್ಯಾದಿ ಗುಣಗಳನ್ನು ಹೊಂದಿದೆ.