
ಸಿರುಗುಪ್ಪ: ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸರಕಾರದ ಕಿವಿ ಮತ್ತು ಕಣ್ಣುಗಳಿದ್ದಂತೆ, ಈ ನಿಟ್ಟಿನಲ್ಲಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿ.ಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸಮೇರ್ ಹೇಳಿದರು.

ಸಿರುಗುಪ್ಪ ತಾಲ್ಲೂಕು ಪಂಚಾಯತಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡುತ್ತಾ, ಮಾರ್ಚ್ ಅಂತ್ಯದೊಳಗೆ 100% ತೆರಿಗೆ ವಸೂಲಾತಿ ಮಾಡಲು, SBM ಯೋಜನೆಯಡಿ ಬಾಕಿ ಉಳಿದ ಕಾಮಗಾರಿಗೆ ಕಾರ್ಯದೇಶ ನೀಡಿ ತ್ವರೀತವಾಗಿ ಮುಕ್ತಾಯಗೊಳಿಸಲು, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲು, NRLM ಯೋಜನೆಯಡಿ ಹೊಸ ಗುಂಪುಗಳ ರಚನೆ ಮಾಡಲು ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಕೆಲಸ ಒದಗಿಸುವ ಸಲುವಾಗಿ ಅಗತ್ಯ ಕ್ರಮ ವಹಿಸಲು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಇಒ ಪವನ್ ಕುಮಾರ್ ಎಸ್ ದಂಡಪ್ಪನವರು, ನರೇಗಾ ಎಡಿ ಮನೋಹರ, ಪಂಚಾಯತ್ ರಾಜ್ ಎಡಿ ಬಸವರಾಜ, ತಾ.ಪಂ ಎಒ ಸರಸ್ವತಿ, RWS ಇಲಾಖೆಯ AEE ರವೀದ್ರ ನಾಯ್ಕ್, ತಾಲ್ಲೂಕಿನ ಎಲ್ಲಾ ಪಿಡಿಒ ಗಳು, ತಾಲ್ಲೂಕು ಪಂಚಾಯತಿಯ ಸಿಬ್ಬಂದಿಗಳು, ತಾಂತ್ರಿಕ ಸಹಾಯಕರು ಹಾಜರಿದ್ದರು.