
ದಾರವಾಡ: ಚನ್ನಮ್ಮನ ಕಿತ್ತೂರು ಸಮೀಪದ ಖಾನಾಪೂರ ತಾಲೂಕಿನ ಕೆ.ಯು.ಡಬ್ಲೂ.ಜೆ ಸಂಘದ ಅಧ್ಯಕ್ಷರಾಗಿ ಕಾಶೀಮ್ ಹಟ್ಟಿಹೊಳಿ, ಉಪಾಧ್ಯಕ್ಷರಾಗಿ ವಾಸುದೇವ ಚೌಗಲೇ, ಕಾರ್ಯದರ್ಶಿಯಾಗಿ ಪ್ರಸನ್ನ ಕುಲಕರ್ಣಿ ಆಯ್ಕೆಯಾಗಿದ್ದಾರೆ.

j3tvkannada
ಅಧ್ಯಕ್ಷ ಹಟ್ಟಿಹೊಳ್ಳಿ ಸರ್ವಾನು ಮತದಿಂದ ಆಯ್ಕೆಯಾದರು. ಇವರು ಸಂಯುಕ್ತ ಕರ್ನಾಟಕ ಗ್ರಾಮೀಣ ವರದಿಗಾರ. ಇವರು ಮಾತನಾಡಿ ನಮ್ಮ ಸಂಘದ ಸರ್ವಸದಸ್ಯರನ್ನು ಒಗ್ಗೂಡಿಸಿಕೊಂಡು ತಾಲೂಕಿನ ಪತ್ರಕರ್ತರ ಭವನದ ಸ್ಥಳ ಹಾಗೂ ಕಟ್ಟಡದ ನಿರ್ಮಾಣಕ್ಕೆ ಸರ್ಕಾರ ಹಾಗೂ ಸಂಸದರು, ಶಾಸಕರು, ಮಾಜಿ ಶಾಸಕರು, ಸೇರಿದಂತೆ ಹಲವಾರು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ. ತಕ್ಷಣ ಕಾರ್ಯರೂಪಕ್ಕೆ ತರುವುದಾಗಿ ಭರವಸೆ ನೀಡಿದರು. ಸರ್ಕಾರದಿಂದ ಯಾವುದೇ ಯೋಜನೆ ಜಾರಿಯಾದರು ಅವುಗಳನ್ನು ನಮ್ಮ ಸಂಘದ ಸದಸ್ಯರಿಗೆ ಮುಟ್ಟಿಸುವಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆಂದರು.
ಮರಾಠಿ ಪುಡಾರಿ ಪತ್ರಿಕೆ ವರದಿಗಾರ ವಾಸುದೇವ ಚೌಗಲೇ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡು ಮಾತನಾಡಿ ಕರ್ನಾಟಕ ಸರ್ಕಾರದ ಸಾರ್ವಜನಿಕ ವಾರ್ತಾ ಮತ್ತು ಸಂಪರ್ಕ ಇಲಾಖೆ ಆಯುಕ್ತ ಹಿರಿಯ ಐ.ಪಿ.ಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಇವರನ್ನು ಭೇಟಿಯಾಗಿ ಇಲ್ಲಿಯ ಸ್ಥಿತಿಗತಿ ಕುರಿತು ಸಂವಾದ ನಡೆಸಿ ತಾಲೂಕಿನ ಪತ್ರಕರ್ತರ ಸ್ಥಳ ಹಾಗೂ ಭವನದ ಕಟ್ಟಡ ನಿರ್ಮಾಣಕ್ಕೆ ನಿಮ್ಮೆಲ್ಲರನ್ನು ಒಗ್ಗೂಡಿಸಿಕೊಂಡು ಮನವಿ ಪತ್ರ ಸಲ್ಲಿಸಿ ಬೇಗನೇ ಕಾರ್ಯರೂಪಕ್ಕೆ ತರಲು ಶ್ರಮಿಸುತ್ತೇನೆಂದರು ಎಂದು ಹೇಳಿದರು.