
ಬಳ್ಳಾರಿ: ಸಿರುಗುಪ್ಪ ನಗರದ ಕುಡಿಯುವ ನೀರಿನ ಕೆರೆ ಹತ್ತಿರ ಅಮೃತ ಯೋಜನೆ ಅಡಿಯಲ್ಲಿ 38 ಕೋಟಿ 38 ಲಕ್ಷ ವೆಚ್ಚದ ಕಾಮಗಾರಿಯ ಭೂಮಿ ಪೂಜೆಯನ್ನು ಗುರುವಾರ ಮಧ್ಯಾಹ್ನ 12:45ಕ್ಕೆ ನೆರವೇರಿಸಿದರು. ನಂತರ ಶಾಸಕ ಬಿ ಎಂ ನಾಗರಾಜ್ ಅವರು ಮಾತನಾಡಿ ಸಿರುಗುಪ್ಪ ನಗರಕ್ಕೆ ಇನ್ನು ಬಹಳಷ್ಟು ಕುಡಿಯುವ ನೀರಿನ ಯೋಜನೆಗಳನ್ನು ಪ್ರಾರಂಭ ಮಾಡಲಾಗುತ್ತೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ರೇಣುಕಮ್ಮ, ಉಪಾಧ್ಯಕ್ಷರಾದ ಯಶೋಧ ಮೂರ್ತಿ, ಹಳೆಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ ವೀರೇಶ್, ನಗರಸಭೆ ಕಮಿಷನರ್ ಗುರುಪ್ರಸಾದ್ ಮತ್ತಿತರು ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.