
ಮಂಡ್ಯ: ಹೆತ್ತವರ ಮಡಿಲಲ್ಲಿ ನಕ್ಕು ನಲಿಯ ಬೇಕಿದ್ದ ಕಂದಮ್ಮ, ಅಮ್ಮನ ಮಡಿಲಲ್ಲೇ ಪ್ರಾಣ ಬಿಟ್ಟಿದೆ. ಟ್ರಾಫಿಕ್ ಪೊಲೀಸರು ಮಾಡಿದ ಒಂದೇ ಒಂದು ಯಡವಟ್ಟು ಇವತ್ತು ಚಿಕ್ಕ ಮಗುವಿನ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಮಂಡ್ಯದಲ್ಲಿ ನಡೆದ ಈ ಘಟನೆಯಿಂದ ರಾಜ್ಯಾದ್ಯಂತ ಪೊಲೀಸರ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಟ್ರಾಫಿಕ್ ಪೊಲೀಸರು ಇವತ್ತು ಮಾನವೀಯತೆ ಮೆರೆದಿದ್ದರೆ ಇಂದು ಈ ಮಗುವಿನ ಪ್ರಾಣ ಉಳಿಯುತ್ತಿತ್ತು. ಅದೆಲ್ಲವೂ ಈಗ ಕೈ ಮೀರಿ ಮಗುವಿನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.

j3tvkannada.in
ಅಯ್ಯೋ.. ಮಗಳೆ, ನಮ್ಮನ್ನು ಬಿಟ್ಟು ಹೋಗಿ ಬಿಟ್ಯಾ, ಒಂದೇ ಒಂದು ಸಲ ಕಣ್ಣು ಬಿಡಮ್ಮ, ಎಂದು ಪುಟ್ಟ ಕಂದಮ್ಮನ ಬಳಿ ಹೆತ್ತವರ ಗೋಳಾಟವಾಗುತ್ತಿದ್ದಂತೆ, ಟ್ರಾಫಿಕ್ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗು ಹೃತೀಕ್ಷಾಗೆ ನಾಯಿ ಕಚ್ಚಿದ್ದರಿಂದ ತಂದೆ, ತಾಯಿ ಬೈಕ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.
ಹೆಲ್ಮೆಟ್ ತಪಾಸಣೆಗಾಗಿ ಸ್ವರ್ಣಸಂದ್ರ ಬಳಿ ಸಂಚಾರಿ ಠಾಣೆ ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಮಗುವಿಗೆ ಹುಷಾರಿಲ್ಲ, ನಾಯಿ ಕಚ್ಚಿದೆ ಎಂದು ಹೇಳಿದೆ, ನಂತ್ರ ಒಬ್ಬರು ಪೊಲೀಸರು ಹೋಗು ಅಂದ್ರು. ಆಗ ನಾನು ಬೈಕನ್ನ ಚಲಾಯಿಸಿದೆ. ನಂತ್ರ ಸ್ವಲ್ಪ ಮುಂದೆ ಇದ್ದ ಮತ್ತೊಬ್ಬ ಪೊಲೀಸ್ ಬೈಕ್ ಹಿಡಿದುಕೊಂಡ್ರು. ಇವರು ನನ್ನ ಬೈಕ್ ಹಿಡಿದುಕೊಂಡಿದ್ರಿಂದ ನಿಯಂತ್ರಣ ತಪ್ಪಿ ಮಗು ರಸ್ತೆಗೆ ಬಿತ್ತು. ಆಗ ಹಿಂದೆ ಬರ್ತಿದ್ದ ಟೆಂಪೊ ಹರಿದು ಮಗು ಮೃತಪಟ್ಟಿದೆ ಎಂದು ಬೈಕ್ ಓಡಿಸುತ್ತಿದ್ದ ಮಗುವಿನ ದೊಡ್ಡಪ್ಪ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.