
ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಪುರಾಣ ಪ್ರಸಿದ್ಧ ಕೋದಂಡ ರಾಮಸ್ವಾಮಿಯ ರಥೋತ್ಸವವು ನಡೆದಿದ್ದು ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ಜರುಗಿತು. ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ಕ್ರಿಯಾ ಮೂರ್ತಿಗಳ ನೇತೃತ್ವದಲ್ಲಿ ಅರ್ಚಕರ ಬಳಗವು ಪೂಜಾ ಕಾರ್ಯಕ್ರಮಗಳನ್ನು ನೇರವೇರಿಸುತ್ತಿದ್ದಂತೆ, ಸರತಿ ಸಾಲಿನಲ್ಲಿ ಭಕ್ತರು ಸ್ವಾಮಿಯ ದರ್ಶನ ಪಡೆಯಲು ಮುಂದಾದರು. ಮಧ್ಯಾಹ್ನ 12:30 ರಲ್ಲಿ ಪುರಾಣ ಪ್ರಸಿದ್ಧ ಶ್ರೀ ಕೋದಂಡರಾಮ ಸ್ವಾಮಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮಕ್ಕೆ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹಾಗೂ ಸಂಸದ ಮಲ್ಲೇಶ್ ಬಾಬು ಭಾಗವಹಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

j3tvkannada
ಬಂಗಾರಪೇಟೆ ಪಟ್ಟಣದ ಬಜಾರ್ ರಸ್ತೆ ಹಾಗೂ ಎಲ್ ಮಲ್ಲಪ್ಪ ರಸ್ತೆಯಲ್ಲಿ ಸಕಲ ಮಂಗಳವಾದ್ಯ ಹಾಗೂ ಮೇಳಗಳೊಂದಿಗೆ ರಥೋತ್ಸವ ಮೆರವಣಿಗೆಯಲ್ಲಿ ಸಾಗಿತು. ರಥೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಜೈ ಶ್ರೀ ರಾಮ್, ಜೈ ಶ್ರೀ ರಾಮ್ ಎಂದು ಕೋದಂಡ ರಾಮಸ್ವಾಮಿಗೆ ಘೋಷಣೆ ಕೂಗುತ್ತಾ ರಥ ಎಳೆದರು. ಇದೇ ವೇಳೆ ಮಹಿಳೆಯರು ಮಕ್ಕಳು ರಥಕ್ಕೆ ಬಾಳೆ ಹಣ್ಣು, ಉತ್ತತ್ತಿ ಎಸೆದು ಹರಕೆ ತೀರಿಸಿದರು. ಇನ್ನು ಇದೇ ವೇಳೆ ಮಾಜಿ ಸಂಸದ ಎಸ್ ಮುನಿಸ್ವಾಮಿ ಅವರು ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನೆರೆದಿದ್ದ ಯುವಕರಲ್ಲಿ ಹುರುಪು ತುಂಬಿದರು. ಸುಡು ಬಿಸಿಲಿನ ಮಧ್ಯೆ ರಥ ಎಳೆಯುವ ಜವಾಬ್ದಾರಿ ಹೊತ್ತಿದ್ದ ಯುವಕ ಭಕ್ತಗಣಕ್ಕೆ ಸಾಥ್ ಕೊಟ್ಟ ಮಾಜಿ ಸಂಸದರು, ಕೇಸರಿ ಬಟ್ಟೆ ಕಟ್ಟಿಕೊಂಡು ರಥ ಎಳೆದರು. ಅಲ್ಲದೇ ರಥೋತ್ಸವ ದೇಗುಲಕ್ಕೆ ವಾಪಾಸ್ ಮರಳುವವರೆಗೂ ಯುವಕರಿಗೆ ಸಾಥ್ ನೀಡಿದರು. ಇದೇ ವೇಳೆ ಸುಡು ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದು ವಿಶೇಷವಾಗಿತ್ತು.
ಈ ವೇಳೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮಾತನಾಡಿ, ಶ್ರೀ ರಾಮನು ಭಾರತದ ಗಡಿಯಲ್ಲಿ ನಮ್ಮ ಸೈನಿಕರು ಶತ್ರು ಸೇನೆಗೆ ಹೆಚ್ಚಿನ ಬಲ ನೀಡಲಿ ಎಂದು, ಸೈನಿಕರಿಗೆ ಶಕ್ತಿ ನೀಡಲಿ ಎಂದರು. ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ಕೋದಂಡ ರಾಮಸ್ವಾಮಿಯ ಬ್ರಹ್ಮರಥೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದೇವೆ. ಈ ಕೋದಂಡ ರಾಮಸ್ವಾಮಿ ದೇವಾಲಯಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ. ಭವಿಷ್ಯ ಭಾರತ ದೇಶದಲ್ಲಿ ಬಲಗಡೆ ಬಾಗಿ ನಗುಮುಖ ಇರುವಂತ ದೇವಾಲಯವೆಂದರೆ ಅದು ಬಂಗಾರಪೇಟೆ ಕೋದಂಡ ರಾಮಸ್ವಾಮಿ ದೇವಾಲಯ ಎಂದು ಹೇಳಿದರು.