
ತುಮಕೂರು: ವರ್ಷಕೊಮ್ಮೆ ರಜೆ ಪಡೆದು ತಮ್ಮ ಮಕ್ಕಳ ಶಾಲಾ ದಾಖಲಾತಿಗೆ ಬಂದಿದ್ದ ಬಿ.ಎಸ್.ಫ್ ಯೋಧ ವೇಣುಗೋಪಾಲ್ ಕರ್ತವ್ಯ ಕರೆಗೆ ರಜೆ ಮೊಟಕುಗೊಳಿಸಿ ದೇಶ ಸೇವೆಗೆ ಗಡಿಯತ್ತ ಮರಳಿದ್ದಾರೆ.

j3tvkannada
ವೇಣುಗೋಪಾಲ್ ಅವರು ಗುಬ್ಬಿ ಪಟ್ಟಣದ 19ನೇ ವಾರ್ಡ್ ನಿವಾಸಿಗಳಾಗಿದ್ದಾರೆ. ಸೇನೆಗೆ ಮರಳುತ್ತಿರುವ ಯೋಧ ವೇಣುಗೋಪಾಲ್ ಅವರಿಗೆ ಗುಬ್ಬಿ ನಾಗರಿಕರು ಆತ್ಮೀಯ ಬೀಳ್ಕೊಡುಗೆ ನೀಡಿ, ಯುದ್ಧ ಗೆದ್ದು ಬನ್ನಿ ಎಂದು ಹಾರೈಸಿದರು.
ವೇಣುಗೋಪಾಲ್ ಅವರು ಕರ್ತವ್ಯಕ್ಕೆ ಮರಳುತ್ತಿರುವ ವಿಷಯ ತಿಳಿದ ತಕ್ಷಣ ಅವರ ಮನೆಗೆ ಗುಬ್ಬಿ ನಾಗರಿಕರ ತಂಡವೊಂದು ಧಾವಿಸಿ ಸನ್ಮಾನ ಮಾಡಿದರು. ಶತ್ರು ದೇಶ ಪಾಕಿಸ್ತಾನದ ವಿರುದ್ಧ ಸೆಣಸಾಡಿ, ವೀರ ಗೆಲುವು ಸಾಧಿಸಿ ಕ್ಷೇಮವಾಗಿ ಮರಳಿ ಬರುವಂತೆ ಶುಭ ಕೋರಿದರು.