ಬಾಗಲಕೋಟೆ : ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ನಮ್ಮ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಸ್ಟ್ರಾಂಗ್ ಇದ್ದಾರೆ. ಖರ್ಗೆ ಅವರಿಗೆ ಇನ್ ಆ್ಯಂಡ್ ಔಟ್ ಎಲ್ಲವೂ ಗೊತ್ತಿದೆ. ನಮ್ಮವರು ಅಭಿಪ್ರಾಯ ಹೇಳಿದ್ರೆ ಅದನ್ನು ಮಾಧ್ಯಮಗಳು ಇನ್ನೊಂದು ರೀತಿಯಲ್ಲಿ ಹೇಳುತ್ತವೆ ಎಂದರು. ಸಿ.ಎಂಗೆ ಪವರ್ ಇದೆ ಬಜೆಟ್ ಮಂಡಿಸುತ್ತಾರೆ ಮತ್ತು ಉತ್ತರ ಕೊಡುತ್ತಾರೆ.

ಅಧಿಕಾರದಲ್ಲಿ ಇದ್ದವರು ತಮ್ಮ ತಮ್ಮ ಅಭಿಪ್ರಾಯ ಹೇಳಬೇಕು ಹೇಳುತ್ತಾರೆ. ಅಧಿಕಾರ ಇಲ್ಲದೇ ಇರುವ ಪಕ್ಷದವರನ್ನು ನೋಡಿದ್ದೀರಾ, ಅಧ್ಯಕ್ಷರನ್ನ ತೆಗೆಯಬೇಕು, ಅಧ್ಯಕ್ಷ ಹಂಗೆ ಮಾಡ್ತಾನೆ, ಹಿಂಗೆ ಮಾಡ್ತಾನೆ ಅಂತಿದ್ದಾರೆ. ಇಂತಹ ಹೀನಾಯ ಪಕ್ಷ ನಮ್ಮ ವಿಪಕ್ಷವಾಗಿದೆ. ವಿಪಕ್ಷಕ್ಕಿಂತ ನಾವು ಬಹಳ ಉತ್ತಮವಾಗಿದ್ದೇವೆ. ನಮ್ಮ ಸರ್ಕಾರ ಗಟ್ಟಿ ಸರ್ಕಾರವಾಗಿದೆ. ಏನೋ ಅಭಿಪ್ರಾಯ ಹೇಳಿರಬಹುದು. ನಮ್ಮ ಸಿ.ಎಂ ತುಂಬಾ ಸ್ಟ್ರಾಂಗ್ ಇದ್ದಾರೆ ಏನೂ ತೊಂದರೆಯಿಲ್ಲ. ನಮ್ಮ ಸರ್ಕಾರ ಇದೇ ಇರುತ್ತೆ ಎಂದು ಹೇಳಿದರು.