
ದಾವಣಗೆರೆ: ರೌಡಿಶೀಟರ್ ಸಂತೋಷ್ ಅಲಿಯಾಸ್ ಕಣುಮನ (40) ಕೊಲೆ ಪ್ರಕರಣವು ದಾವಣಗೆರೆ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಮೃತನ ಕುಟುಂಬದವರು, ಸಂಬಂಧಿಕರು, ಶಿಷ್ಯರು ಸೇರಿ ನೂರಾರು ಜನ ಇಲ್ಲಿನ ಜಿಲ್ಲಾಸ್ಪತ್ರೆ ಶವಾಗಾರದ ಬಳಿ ಜಮಾಯಿಸಿದ್ದರು. ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಟ್ಟರು. ಕೆಲ ಸ್ನೇಹಿತರು ಮತ್ತು ಕುಟುಂಬದವರು ದುಃಖದಲ್ಲಿ ಮುಳಗಿದ್ದರು. ತಾಲೂಕಿನ ಹದಡಿ ಬಳಿಯಿರುವ ತೋಟದಲ್ಲಿ ಪೊಲೀಸರ ಕಣ್ಗಾವಲಿನಲ್ಲಿ ಮಂಗಳವಾರ ಬೆಳಗ್ಗೆ ನಡೆಯಿತು. ಅಂತ್ಯಕ್ರಿಯೆ ನೆರವೇರಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಸಂತೋಷ್ ಪತ್ನಿ ಪೊಲೀಸ್ ಠಾಣೆಯಲ್ಲಿ 12 ಜನರ ವಿರುದ್ಧ ಕೇಸ್ ದಾಖಲಾಗಿದೆ. ಪತಿ ಮಧ್ಯಾಹ್ನ ಊಟ ಮಾಡಿಕೊಂಡು ವ್ಯವಹಾರದ ಸಂಬಂಧ ಹೊರಗೆ ಬಂದಿರುತ್ತಾರೆ. ಸಂಜೆ 5.30- 5.45ರ ವೇಳೆಗೆ ನನ್ನ ಸಂಬಂಧಿ ಮಂಜುನಾಥ ಎಂಬುವವರು ಕರೆ ಮಾಡಿ, ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ನನ್ನ ಗಂಡನ ತಲೆಗೆ ಹೊಡೆದು ಕೊಲೆ ಮಾಡಿರುತ್ತಾರೆಂದು ವಿಷಯ ತಿಳಿಸಿದರು. ನಾನು ನನ್ನ ಮಗನೊಂದಿಗೆ ಬಂದು ನೋಡಿದಾಗ ಕೊಲೆ ಆಗಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ನಡುವೆ ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ದೇಹವನ್ನು ಹಸ್ತಾಂತರಿಸಲಾಯಿತು. ನನ್ನ ಗಂಡ ರೌಡಿಸಂ ಬಿಟ್ಟಿದ್ದರು. ಆದರೂ ಅವರನ್ನು ಕೊಲೆ ಮಾಡಿದ್ದಾರೆ. ಅವರೆಲ್ಲರನ್ನೂ ಎನ್ಕೌಂಟರ್ ಮಾಡಬೇಕು ಎಂದು ಕಣುಮನ ಪತ್ನಿ ಶ್ರುತಿ ಒತ್ತಾಯಿಸಿದ್ದಾರೆ.

j3tvkannada
ಹತ್ಯೆಗೀಡಾದ ಸಂತೋಷ್ ಕುಮಾರ್ ಅಲಿಯಾಸ್ ಕಣುಮನ ಪತ್ನಿ ಶೃತಿ ಠಾಣೆಗೆ ನೀಡಿರುವ ದೂರಿನಲ್ಲಿ ಗುಂಡಪ್ಪ, ಕಾರ್ತಿಕ್, ಭರತ್ ಕಾಲನಿ, ನವೀನ್ ಬೂದಾಳ್ ರಸ್ತೆ, ನವೀನ್ ತಂದೆ ಮಲ್ಲೇಶಪ್ಪ, ಚಾವಳಿ ಸಂತು, ಬಸವರಾಜ ಅಲಿಯಾಸ್ ಬಸ್ಯ, ಹನುಮಂತ, ಗಡ್ಡ ವಿಜಿ, ಚಿಕ್ಕನಹಳ್ಳಿ ಶಿವು, ಕಡ್ಡಿ ರಘು, ಪ್ರಶಾಂತ್ ಪಚ್ಚಿ, 60 ಅಡಿ ರಸ್ತೆ ಗಣಿ ಇತರರು ಸೇರಿ ಕೊಲೆ ಮಾಡಿದ್ದು,ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

j3tvkannada
ಇನ್ನು ಆರೋಪಿ ಪೈಕಿ ಒಬ್ಬಾತ ಕೊಲೆ ಬಳಿಕ ವಾಟ್ಸಪ್ನಲ್ಲಿ ಟಾಸ್ಕ್ ಕಂಪ್ಲೀಟ್ ಎಂದು ಸ್ಟೇಟಸ್ ಹಾಕಿದ್ದ ಎಂಬ ಮಾತುಗಳು ಕೇಳಿ ಬಂದಿವೆ.

j3tvkannada
ಪೊಲೀಸ್ ತಂಡದೊಂದಿಗೆ ಎ.ಎ.ಸ್ಪಿ ಮಂಜುನಾಥ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಕೊಲೆಯಾದ ಸಂತೋಷ್ ಅಲಿಯಾಸ್ ಕಣುಮ ಜಿಲ್ಲಾ ಪಂಚಾಯಿತಿ ಚುನಾವಣೆಗೆ ತಯಾರಿ ನಡೆಸಿದ್ದ. ಹದಡಿ ಬಳಿ ತೋಟ ಮಾಡಿದ್ದು, ಆ ಕ್ಷೇತ್ರದಿಂದಲೇ ಜಿಪಂ ಚುನಾವಣೆಗೆ ತಯಾರಿ ನಡೆಸಿದ್ದ ಎಂದು ಹೇಳಲಾಗುತ್ತಿದೆ. ಸಂತೋಷ್ ಪತ್ನಿ ಶೃತಿ ಅವರೇ ರೌಡಿಸಂ ಬಿಟ್ಟು, ಕೃಷಿ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಾ, ಜಿಪಂ ಚುನಾವಣೆ ಆಸೆ ಹೊತ್ತಿದ್ದರು ಎಂದು ಮಾಧ್ಯಮದವರಿಗೆ ತಿಳಿಸಿದರು.
ಏಕೆ ಹೀಗಾಯಿತು ಎಂಬುದು ಗೊತ್ತಿಲ್ಲ, ಇತ್ತೀಚೆಗೆ ನಮ್ಮ ಮನೆಯವರು ರೌಡಿಸಂ ಬಿಟ್ಟು ಒಳ್ಳೆಯವರಾಗಿದ್ದರು. ಕೃಷಿ, ರಿಯಲ್ ಎಸ್ಟೇಟ್ ಮಾಡಿಕೊಂಡಿದ್ದರು. ನಾನು ಯಾರ ತಂಟೆಗೂ ಹೋಗುವುದಿಲ್ಲಮ್ಮ, ಮಕ್ಕಳು ದೊಡ್ಡವರಾಗುತ್ತಿದ್ದಾರೆ, ಅವರ ಭವಿಷ್ಯ ಮುಖ್ಯ. ಹಾಗಾಗಿ ಇನ್ಮುಂದೆ ನಾನು ರೌಡಿಸಂ ಮಾಡುವುದಿಲ್ಲ ಎಂದು ಹೇಳುತ್ತಿದ್ದರು. ಬದಲಾದವರನ್ನು ಬದುಕಲು ಬಿಡುವುದಿಲ್ಲ ಎಂದರೆ ಹೇಗೆ? ನನ್ನ ಗಂಡನಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಕೊಂದವರನ್ನು ಎನ್ಕೌಂಟರ್ ಮಾಡಬೇಕು ಎಂದು ಪತ್ನಿ ಶೃತಿ ಒತ್ತಾಯಿಸಿದರು.