
ಕೋಲಾರ: ಮಾಲೂರು ತಾಲ್ಲೂಕು ಟೇಕಲ್ ಹೋಬಳಿಯಲ್ಲಿ ನಿಯಮ ಮೀರಿ ಅನಧಿಕೃತವಾಗಿ ನಡೆಸುತ್ತಿರುವ ಜಲ್ಲಿ ಕ್ರಷರ್ ಗಳ ಮೇಲೆ ಯಾವುದೇ ಕಾನೂನು ರೀತಿ ಕ್ರಮ ಕೈಗೊಳ್ಳದ ತಾಲ್ಲೂಕು ಹಾಗೂ ಜಿಲ್ಲಾಡಳಿತದ ವಿರುದ್ಧ ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು ಸಾರ್ವಜನಿಕ ದೂರುಗಳು ಬಂದ ಹಿನ್ನಲೆ, ಟೇಕಲ್ ಹೋಬಳಿಯ ಸುಮಾರು ಜಲ್ಲಿ ಕ್ರಷರ್ ಗಳಿಗೆ ಭೇಟಿ ನೀಡಿದ ಮಾನ್ಯ ಉಪ ಲೋಕಾಯುಕ್ತರು, ಗಣಿಗಾರಿಕೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ನಡೆಸುತ್ತಿರುವುದನ್ನು ಮನಗಂಡು ಅನೇಕ ಅಧಿಕಾರಿಗಳ ಮೇಲೆ ಸುಮೊಟೊ ಕೇಸ್ ದಾಖಲಿಸಿದ್ದಾರೆ, ಮಾಲೂರು ತಾಲ್ಲೂಕು ತಹಶೀಲ್ದಾರ್.

j3tvkannada
ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿ ಹಾಗೂ ಸಂಬಂಧಿಸಿದ ಇನ್ನೂ ಅನೇಕ ಅಧಿಕಾರಿಗಳಿಗೆ ಅನಧಿಕೃತವಾಗಿ ನಡೆಸುತ್ತಿರುವ ಕ್ರಷರ್ ಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ಎಚ್ಚರಿಕೆ ನೀಡಿ ಹೋದರೂ, ಇದುವರೆವಿಗೂ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಪರಿಣಾಮ ದಿನಾಂಕ ೧೧-೦೬-೨೦೨೫ ರ ಮುಂಜಾನೆ ೭.೩೦ ರಲ್ಲಿ ಟೇಕಲ್ ಹೋಬಳಿ ತಿಮ್ಮನಾಯಕನಹಳ್ಳಿ ಅಗ್ರಹಾರದ ಸರ್ವೇ ನಂಬರ್ ೩೫ ರಲ್ಲಿ ನಡೆಸುತ್ತಿರುವ, ಜಲ್ಲಿ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಕ್ಷೇತ್ರನಹಳ್ಳಿ ವೆಂಕಟೇಶ್ ಗೌಡರ ಮಗ ಹರಿಪ್ರಸಾದ್ ಒಡೆತನದ ಐಶ್ವರ್ಯ ಸ್ಟೋನ್ ಕ್ರಷರ್ ನಲ್ಲಿ ಮಾಲೀಕರ ಅಜಾಗರೂಕತೆಯಿಂದ ಒಬ್ಬ ಬಡ ಕಾರ್ಮಿಕ ಸಾವನ್ನಪ್ಪಿದ್ದು, ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಕೂಡಲೇ ಸರ್ಕಾರವು ಎಚ್ಚರಗೊಂಡು ಇನ್ನಷ್ಟು ಸಾವು ನೋವುಗಳನ್ನು ತಡೆಯಬೇಕಾದರೆ ರಾಜಕೀಯ ಮುಖಂಡರುಗಳ ಒತ್ತಡಗಳಿಗೆ ಮಣಿದು, ಅನಧಿಕೃತ ಗಣಿಗಾರಿಕೆಯನ್ನು ತಡೆಯುವಲ್ಲಿ ವಿಫಲರಾಗಿರುವ ತಾಲ್ಲೂಕು, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ, ಜಿಲ್ಲಾ ಹಾಗೂ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ವಿ.ರಮೇಶ್ ಆಗ್ರಹಿಸಿದ್ದಾರೆ.