
ಚಿಕ್ಕಬಳ್ಳಾಪುರ: ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಸಾರ್ವಜನಿಕ ಆಸ್ಪತ್ರೆ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ಹಾಕಿದ್ದ ಸಿಗ್ನಲ್ ದೀಪಗಳು ಕೆಟ್ಟು ನಿಂತಿದ್ದು, ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಕಿರಿ ಕಿರಿ ಉಂಟಾಗುತ್ತಿದೆ.

j3tvkannada
ಈ ವೃತ್ತ ಮುಖ್ಯರಸ್ತೆಯಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದ ಹಿನ್ನಲೆ ಪುರಸಭೆಯವರು ವಾಹನ ದಟ್ಟಣೆ ಕಿರಿ ಕಿರಿ ತಪ್ಪಿಸಲು 18 ಲಕ್ಷ ವೆಚ್ಚದಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಿದ್ದರು.
ಇದೀಗ ಸಿಗ್ನಲ್ ದೀಪ ಕೆಟ್ಟು ನಿಂತಿದ್ದರಿಂದ ಸಂಚಾರ ನಿಯಮಗಳ ಪಾಲನೆ ಆಗುತ್ತಿಲ್ಲ. ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿವೆ. ಪಾದಾಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿವೆ ಎಂಬುದು ಸಾರ್ವಜನಿಕರ ದೂರಾಗಿದೆ.

j3tvkannada
ಕಳೆದ ಎರಡು ತಿಂಗಳ ಹಿಂದೆ ಹೆಚ್ಚು ಭಾರವುಳ್ಳ ಲಾರಿಯೊಂದು ಟ್ರಾಫಿಕ್ ಸಿಗ್ನಲ್ ದೀಪಗಳ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ, ಕಂಬವು ಪೊಲೀಸ್ ಚೌಕಿ ಮೇಲೆ ಉರುಳಿತ್ತು. ನಂತರ ಪೊಲೀಸರು ಬೃಹತ್ ಯಂತ್ರದ ಮೂಲಕ ಕಂಬವನ್ನು ಮೇಲಕ್ಕೆ ಎತ್ತಿ ನಿಲ್ಲಿಸಿದ್ದರು.
ಆದರೆ ಅಧಿಕಾರಿಗಳ ಸೂಕ್ತ ನಿರ್ವಹಣೆ ಇಲ್ಲದೆ ಕಂಬವು ನೆಲಕ್ಕೆ ಉರುಳುವ ಹಂತದಲ್ಲಿದೆ. ಜೊತೆಗೆ ದೀಪಗಳು ಉರಿಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.