
ರಾಮನಗರ: ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದರೆ ಆರೋಗ್ಯವಂತರಾಗಿ ಇರಲು ಸಾಧ್ಯ ಎಂದು ಎನ್ಎಸ್ಎಸ್ ಶಿಬಿರಾರ್ಥಿಗಳು ಗ್ರಾಮಸ್ಥರಿಗೆ ಸ್ವಚ್ಛತೆ ಮೂಲಕ ಜಾಗೃತಿ ಮೂಡಿಸಿದರು.

j3tvkannada
ತಾಲ್ಲೂಕಿನ ಬ್ಯಾಲಕೆರೆ ಶಿವಕುಮಾರಸ್ವಾಮಿ ಗ್ರಾಮೀಣ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಸರ್ಕಾರಿ ರಾಮನಾರಾಯಣ್ ಚೆಲ್ಲರಾಂ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಡಿ ಸ್ವಚ್ಛತೆ ಮತ್ತು ಸಾಮಾಜಿಕ ಅರಿವು ಕಾರ್ಯಕ್ರಮ ನಡೆಯಿತು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಸರ್ಕಾರಿ ಆರ್.ಸಿ ಕಾಲೇಜಿನ ಪ್ರಾಂಶುಪಾಲ ಡಾ.ಏಜಾಜ್ ಅಹ್ಮದ್ ಖಾನ್ ಮಾತನಾಡಿ, ಶಿಬಿರಾರ್ಥಿಗಳು ಗ್ರಾಮೀಣ ಭಾಗದ ವಾತಾವರಣ ಯಾವ ರೀತಿ ಇರುತ್ತದೆ ಎಂಬುದನ್ನು ತಿಳಿಯುವ ಕೆಲಸ ಮಾಡಬೇಕು.

j3tvkannada
ರೈತರು ಹೆಚ್ಚು ಮನೆಯಲ್ಲಿ ಸಮಯ ಕಳೆಯುವುದಕ್ಕಿಂತ ತಮ್ಮ ಹೊಲಗಳಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಬೆಳಗ್ಗೆ ಹೋದ ರೈತ ಸಂಜೆಯಾದ ನಂತರವಷ್ಟೇ ಮನೆಗೆ ಬರುತ್ತಾರೆ. ಅವರಿಗೆ ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಂಡಾಗ ತಮ್ಮ ಆರೋಗ್ಯ ಕೂಡ ಸ್ವಚ್ಛವಾಗಿರುತ್ತದೆ ಎಂದರು.
ಎನ್.ಎಸ್.ಎಸ್. ಶಿಬಿರ ಸಂಯೋಜನಾಧಿಕಾರಿ ಗೋವಿಂದಗೌಡ, ಸಂಚಾಲಕರಾದ ಡಾ.ಶೋಭಾ, ಸಹ ಸಂಚಾಲಕ ಡಾ.ಹರೀಶ್, ಶಿಬಿರಾಧಿಕಾರಿಗಳಾದ ಡಾ.ಶೋಭಾ, ಶ್ರೀಕಾಂತ್ ಸೇರಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.