
ಬಳ್ಳಾರಿ: ಪಟ್ಟಣದ ಕೋರ್ಟ್ ರಸ್ತೆ, ಎ.ಪಿ.ಎಂ.ಸಿ, ವೆಂಕಟೇಶ್ವರ ದೇವಸ್ಥಾನದ ಬಳಿ ತಡರಾತ್ರಿ ಕರಡಿ ಕಾಣಿಸಿಕೊಂಡಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

j3tvkannada
ಕರಡಿಯು ರಸ್ತೆಯಲ್ಲಿ ಸಂಚಾರ ಮಾಡುವ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಕೋರ್ಟ್ ರಸ್ತೆಯ ಮೂಲಕ ಕರಡಿಯು ಮನೆಯ ಭದ್ರತಾ ಗೋಡೆ ದಾಟಿ ಎ.ಪಿ.ಎಂ.ಸಿ ಸರ್ಕಾರಿ ಶಾಲೆಯ ಕಡೆಗೆ ಓಡಿ ಹೋಗಿದೆ. ಜನರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಕರಡಿಯನ್ನು ಅರಣ್ಯಕ್ಕೆ ಓಡಿಸಿದ್ದಾರೆ.
ಕರಡಿ ಆಹಾರ ಅರಿಸಿಕೊಂಡು ಪಟ್ಟಣಕ್ಕೆ ಬಂದಿರಬಹುದು. ರಸ್ತೆಯಲ್ಲಿ ಬಿದ್ದ ಮಾವಿನ ಹಣ್ಣುಗಳ ವಾಸನೆ ಹಿಡಿದು ಬಂದಿದ್ದು, ಜನರ ಸುರಕ್ಷತೆಯ ದೃಷ್ಟಿಯಿಂದ ಪಟ್ಟಣದಲ್ಲಿ ಒಂದು ವಾರ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಸಂಡೂರಿನ ವಲಯ ಅರಣ್ಯಾಧಿಕಾರಿ ದಾದ ಕಲಂದರ್ ಹೇಳಿದರು.