
ಮಂಡ್ಯ: ಮದ್ಯ ಕುಡಿಯುವುದನ್ನು ಕಡಿಮೆ ಮಾಡಲೆಂದು ಮದ್ಯದ ದರವನ್ನು ಜಾಸ್ತಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

j3tvkannada
ತೂಬಿನಕೆರೆ ಹೆಲಿಪ್ಯಾಡ್ನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮದ್ಯಪಾನ ಸಂಯಮ ಮಂಡಳಿ ಇದೆ ಗೊತ್ತಾ. ಕುಡಿಯುವುದನ್ನು ಪೂರ್ಣ ನಿಲ್ಲಿಸಲಾಗುವುದಿಲ್ಲ, ಕಡಿಮೆ ಮಾಡಿಸಬಹುದು. ಅದಕ್ಕಾಗಿ ಸ್ವಲ್ಪ ಬೆಲೆ ಜಾಸ್ತಿ ಇರಲಿ ಬಿಡಿ ಎಂದು ನಗುತ್ತಾ ಉತ್ತರಿಸಿದರು. ಬೆಲೆ ಹೆಚ್ಚಳದ ಮೂಲಕ ಕುಡಿತದ ಪ್ರಮಾಣ ಕಡಿಮೆ ಮಾಡುವುದೇ ನಮ್ಮ ಉದ್ದೇಶ ಎಂದರು.
ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ತರಲಿ
ಮೀಸಲಾತಿಯಲ್ಲಿ ಶೇ 50ರಷ್ಟು ಗರಿಷ್ಠ ಮಿತಿ ತೆಗೆಯಬೇಕು. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ತರಬೇಕು ಎಂದು ಪ್ರಧಾನಿಯನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ನ್ಯಾಯಮೂರ್ತಿ ರೋಹಿಣಿ, ಸಮಿತಿಯ ಶಿಫಾರಸುಗಳ ಜಾರಿ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೂ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.