
ದೇವನಹಳ್ಳಿ: ತಾಲ್ಲೂಕಿನಾದ್ಯಂತ ಶುಕ್ರವಾರ ಸಂಜೆ ಸುರಿದ ಗಾಳಿ ಸಹಿತ ಮಳೆಯಿಂದ ಜನ ಜೀವನ ಅಸ್ತವ್ಯಸ್ಥವಾಯಿತು. ಚನ್ನರಾಯಪಟ್ಟಣ ಹೋಬಳಿ ಸೇರಿದಂತೆ ಬಹುತೇಕ ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೇ ಸ್ಥಳೀಯ ನಿವಾಸಿಗಳ ಮನೆಯಲ್ಲಿ ಕತ್ತಲು ಆವರಿಸಿತ್ತು. ಅರ್ಧ ಗಂಟೆ ಜೋರು ಗಾಳಿ ಸಹಿತ ರಭಸವಾಗಿ ಬಿದ್ದ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಬೆಸ್ಕಾಂ ಸಹಾಯವಾಣಿ ಸೇರಿದಂತೆ ಗ್ರಾಮದ ಲೈನ್ ಮ್ಯಾನ್ಗಳಿಗೆ ಕರೆ ಮಾಡಿದರೂ ವಿದ್ಯುತ್ ಬರಲು ಸಾಕಷ್ಟು ಸಮಯ ಬೇಕು ಎಂದು ಪೋನ್ ಕಟ್ಟ ಮಾಡಿದರು ಎಂದು ಗ್ರಾಮಸ್ಥರು ದೂರಿದರು. ರೈತರ ಜಮೀನು ಕಬಳಿಸಿ ಸ್ಥಾಪನೆಯಾಗಿರುವ ಕೈಗಾರಿಕೆಗಳ ದಿನದ 24 ಗಂಟೆ ವಿದ್ಯುತ್ ನೀಡುವ ಬೆಸ್ಕಾಂಗೆ ಪಟ್ಟ ಮತ್ತು ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲವೇ ಎಂದು ದಿನ್ನೂರು ಗ್ರಾಮದ ಮಂಜುನಾಥ್ ಪ್ರಶ್ನಿಸಿದ್ದಾರೆ.

j3tvkananda
ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಸಂಭ್ರಮಾಚರಣೆ ಮಾಡಲು ಸಿದ್ದತೆ ವಿದ್ಯಾರ್ಥಿಗಳ ಮನೆಯಲ್ಲಿ ಕತ್ತಲು ಆವರಿಸಿತ್ತು. ಮೊಂಬತ್ತಿ ಬೆಳಕಲ್ಲೇ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದೇವು ಎಂದು ವಿದ್ಯಾರ್ಥಿ ರೇಷ್ಮಾ ತಿಳಿಸಿದರು. ಅರ್ಧ ಗಂಟೆಗೂ ಕಾಲ ಮಳೆ ಅಬ್ಬರಿಸಿದ್ದರಿಂದ ದೇವನಹಳ್ಳಿಯ ಸೂಲಿಬೆಲೆ ರಸ್ತೆ ಕೆರೆಯಂತಾಗಿತ್ತು. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ದೇವನಹಳ್ಳಿ ಪುರಸಭೆಯಿಂದ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗಲೇ ಇಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಅರ್ಧಕ್ಕೆ ನಿಂತಿದ್ದು, ರಾಜಕಾಲುವೆಯಲ್ಲಿ ಕೊಳಚೆ ಮಿಶ್ರಿತ ನೀರು ಶೇಖರಣೆಗೊಂಡು ದುರ್ವಾಸನೆ ಬೀರುತ್ತಿದೆ. ಕೂಡಲೇ ಇದನ್ನು ಸರಿ ಪಡಿಸಿ ಮಳೆಗಾಲದಲ್ಲಿ ಜನರ ಆರೋಗ್ಯ ಕಾಪಾಡುವಂತೆ ಸ್ಥಳೀಯರು ಪುರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.