
ಚಿಕ್ಕಬಳ್ಳಾಪುರ: ತೀಮಾಕಲಪಲ್ಲಿ ಗ್ರಾಮದ ಬಳಿ ಎರಡು ಮನೆಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾರ್ಯಾಚರಣೆ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

j3tvkannada
ಬಂಧಿತರಿಂದ 319 ಗ್ರಾಂ ತೂಕದ ಬಂಗಾರ ಒಡವೆ ಮತ್ತು 2 ಕೆ.ಜಿ ಬೆಳ್ಳಿ ಹಾಗೂ ಕಾರನ್ನು ವಶಕ್ಕೆ ಪಡೆದರು. ಮತ್ತೊಂದು ಪ್ರಕರಣದಲ್ಲಿ ಇಬ್ಬರು ಲಾರಿ ಕಳ್ಳರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ತಿಳಿಸಿದ್ದಾರೆ.
ಬಾಗೇಪಲ್ಲಿ ಠಾಣಾ ವ್ಯಾಪ್ತಿಯ ತೀಮಾಕಲಪಲ್ಲಿ ಗ್ರಾಮದ ನರಸಿಂಹಮೂರ್ತಿ ಎಂಬುವವರು 2023 ಏಪ್ರಿಲ್ನಲ್ಲಿ ಒಡವೆ, ನಗದು ಹಣ ಕಳ್ಳತನ ಆಗಿದೆ ಎಂದು ದೂರು ನೀಡಿದ್ದಾರೆ. ಮತ್ತು 2023 ಏಪ್ರಿಲ್ನಲ್ಲಿ ತೀಮಾಕಲಪಲ್ಲಿ ಗ್ರಾಮದ ಸುಧಾಕರ್ ಎಂಬುವವರು ಮನೆಯಲ್ಲಿ ಕಳ್ಳತನ ಆಗಿದೆ ಎಂದು ದೂರು ನೀಡಿದ್ದಾರೆ. 2 ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗೇಪಲ್ಲಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ತಂಡ ನೇಮಿಸಲಾಗಿತ್ತು ಎಂದರು.
ಕಾರ್ಯಾಚರಣೆಯಲ್ಲಿ ಆರೋಪಿ ಹಾಗೂ ಮಾಲು ಉಮಾಶಂಕರ್ ಹಾಗೂ ಜಗನ್ನಾಥ್ ಎಂಬುವವರನ್ನು ಬಂಧಿಸಲಾಗಿದೆ. ಬಾಗೇಪಲ್ಲಿ, ಬನ್ನೇರುಘಟ್ಟ, ಹೊನ್ನಾಳಿ, ಕೊಳ್ಳೆಗಾಲ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಮಾಡಿದ 319 ಗ್ರಾಂ ಒಡವೆ, 2 ಕೆ.ಜಿ ಬೆಳ್ಳಿ ವಸ್ತು ಹಾಗೂ ₹3ಲಕ್ಷದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಲಾರಿ ಕಳ್ಳರ ಬಂಧನ:- ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ 21ನೇ ವಾರ್ಡ್ ನಿವಾಸಿ ನಾರಾಯಣಸ್ವಾಮಿ ಎಂಬುವವರು ಲಾರಿ ಕಳ್ಳತನ ಆಗಿದೆ ಎಂದು 2025ರ ಮಾರ್ಚ್ನಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ತಿಲಕ್ ನಗರದ ಅಜೀಜ್, ಬೆಂಗಳೂರಿನ ಮೊಯಿನ್ ಖಾನ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿತರು ಲಾರಿಯನ್ನು ಬನ್ನೇರುಘಟ್ಟ ಬಳಿ ಗುಜರಿ ಅಂಗಡಿಗೆ ಮಾರಾಟ ಮಾಡಿದ್ದಾರೆ. ಇದರಿಂದ ಬಂದ ₹3ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.