
ಕೊಪ್ಪಳ: ಕೊಪ್ಪಳದ ತಾವರಗೇರಾ ಪಟ್ಟಣದಲ್ಲಿ ನಿನ್ನೆ ಚೆನ್ನಪ್ಪ ನಾರಿನಾಳ ಎಂಬುವವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಕೇವಲ ಎರಡೇ ನಿಮಿಷದಲ್ಲಿ ಬಂದು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಹೋಗಿದ್ದರು. ಈ ಕೊಲೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳಿಸುವಂತಿದೆ. ತಾವರಗೇರಾ ಪಟ್ಟಣದ ಹೃದಯ ಭಾಗವಾದ ಸಿಂಧನೂರು ಸರ್ಕಲ್ ನಲ್ಲಿಯೇ ಈ ಭೀಕರ ಹತ್ಯೆ ನಡೆದಿತ್ತು. ಹಳೇ ದ್ವೇಷ ಹಾಗೂ ಆಸ್ತಿ ವಿಚಾರ ಹಿನ್ನೆಲೆ ನಿನ್ನೆ ಚೆನ್ನಪ್ಪ ನಾರಿನಾಳನನ್ನು ಕೊಲೆ ಮಾಡಲಾಗಿತ್ತು. ಲಾಂಗ್, ಮಚ್ಚಿನಿಂದ ಅಟ್ಟಾಡಿಸಿಕೊಂಡು ಹೋಗಿ ಆರೋಪಿಗಳು ಚೆನ್ನಪ್ಪನನ್ನು ಕೊಲೆ ಮಾಡಿದ್ದರು. ಈ ಪ್ರಕರಣ ಸಂಬಂಧ 10 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

j3tvkannada
ಎಲ್ ಜೆ ಅಯ್ಯಂಗಾರ್ ಬೇಕರಿಯ ಸಿಸಿ ಕ್ಯಾಮೆರಾದಲ್ಲಿ ಸಿನಿಮಾ ಸ್ಟೈಲ್ ನಲ್ಲಿ ನಡೆದ ಚೆನ್ನಪ್ಪ ನಾರಿನಾಳ ಕೊಲೆ ಸಂಪೂರ್ಣವಾಗಿ ರೆಕಾರ್ಡ್ ಆಗಿದೆ. ತಾವರಗೇರಾ ಪಟ್ಟಣದ ಹೃದಯ ಭಾಗವಾದ ಸಿಂಧನೂರು ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ.
ಬೈಕ್ ಮೇಲೆ ಬರುತ್ತಿದ್ದ ಚೆನ್ನಪ್ಪನ ಮೇಲೆ ದುಷ್ಕರ್ಮಿಗಳು ಏಕಾಏಕಿ ಅಟ್ಯಾಕ್ ಮಾಡಿದ್ದು, ಚೆನ್ನಪ್ಪ ಬೇಕರಿಗೆ ರಕ್ಷಣೆಗಾಗಿ ಓಡಿ ಬಂದಾಗ ಹಿಂದೆಯೇ ಬಂದ ನಾಲ್ವರು ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ಮಾಡಿದ್ದಾರೆ. ಕೈ ಮುಗಿದು ಬೇಡಿಕೊಂಡರೂ ಬೀಡದ ಕಿರಾತಕರು ಬೇಕರಿಯಿಂದ ಹೊರಗಡೆ ಎಳೆದು ಹೊರಹಾಕಿ ಕೊಲೆ ಮಾಡಿದ್ದಾರೆ. ಘಟನೆ ನೋಡಿ ಬೇಕರಿ ಮಾಲೀಕ ಹಾಗೂ ಗ್ರಾಹಕರು ಗಾಬರಿಗೊಂಡಿದ್ದಾರೆ. ಈ ವೇಳೆ ಬೇಕರಿಯಲ್ಲಿದ್ದವರು ಕೂಡ ಸಹಾಯಕ್ಕೆ ಬಂದಿಲ್ಲ.
ಇತ್ತ ಮೃತ ಚನ್ನಪ್ಪ ಹುಸೇನಪ್ಪ ನಾರಿನಾಳ ಕುಟುಂಬಸ್ಥರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದು 10 ಜನರ ವಿರುದ್ಧ FIR ದಾಖಲಾಗಿದೆ. ರವಿ ನಾರಿನಾಳ, ಪ್ರದೀಪ ನಾರಿನಾಳ, ಮಂಜುನಾಥ ನಾರಿನಾಳ, ನಾಗರಾಜ ನಾರಿನಾಳ್,ಶ್ಯಾಮಣ್ಣ ನಾರಿನಾಳ್ ಸೇರಿದಂತೆ ಹತ್ತು ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು. ಇದರಲ್ಲಿ ಹಳೇ ದ್ವೇಷ ಮತ್ತು ಆಸ್ತಿ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಗಂಗಾವತಿ ಡಿವೈಎಸ್ಪಿ, ತಾವರಗೇರಾ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ತಾವರಗೇರಾ ಪಟ್ಟಣದ ಹೃದಯ ಭಾಗವಾದ ಸಿಂಧನೂರು ಸರ್ಕಲ್ ನಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಪೊಲೀಸರು ಇದೀಗ 7 ಮಂದಿಯನ್ನು ಬಂಧಿಸಿದ್ದಾರೆ. A1 ರವಿ, A2 ಪ್ರದೀಪ್ , A3 ಮಂಜುನಾಥ್ , A4 ನಾಗರಾಜ್ , A5 ಮಂಜುನಾಥ್, A6 ಗೌತಮ, A7 ಪ್ರಮೋದ್ ಎಂಬ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ.