
ಉಡುಪಿ: ಮಕ್ಕಳ ಮಾನಸಿಕ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಮುಖ್ಯ. ಆದ್ದರಿಂದ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ವಕೀಲ ಟಿ.ಬಿ.ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

j3tvkannada
ಸುಜ್ಞಾನ್ ಎಜುಕೇಷನಲ್ ಟ್ರಸ್ಟ್ನ ವತಿಯಿಂದ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ.ಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿದ್ಯಾರಣ್ಯ ಕ್ಯಾಂಪಸ್ನಲ್ಲಿ ನಡೆಯುತ್ತಿರುವ ‘ಮಂಥನ ಬೇಸಿಗೆ ಶಿಬಿರದ’ 7ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹಿಂದೆ ಮಕ್ಕಳು ಮತ್ತು ಜನರು ಸಮಯ ಕಳೆಯಲು, ಮನರಂಜನೆಗಾಗಿ ಯಕ್ಷಗಾನ, ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ಪ್ರಸ್ತುತ ಈ ರೀತಿಯ ಚಟುವಟಿಕೆಗಳು ಕಡಿಮೆಯಾಗಿದೆ. ಪರೀಕ್ಷೆ ಹಾಗೂ ಅಂಕಗಳಿಸುವ ಒತ್ತಡದಲ್ಲಿರುವ ಮಕ್ಕಳನ್ನು ಒತ್ತಡ ಮುಕ್ತರನ್ನಾಗಿಸಲು ಪತ್ಯೇತರ ಚಟುವಟಿಕೆಗಳು ಹಾಗೂ ಬೇಸಿಗೆ ಶಿಬಿರಗಳು ಸಹಾಯವಾಗುತ್ತದೆ ಎಂದರು.
ಮೊಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸಿ, ಹೊಸ ಚೈತನ್ಯ ತುಂಬಲು ಬೇಸಿಗೆ ಶಿಬಿರಗಳು ಸಹಕಾರಿ. ಮಕ್ಕಳು ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸೃಜನಶೀಲವಾಗಿ ಚಿಂತಿಸಲು ಸಾಧ್ಯ ಎಂದರು. ಸುಜ್ಞಾನ್ ಎಜುಕೇಷನಲ್ ಟ್ರಸ್ಟ್ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯ ಶಿಕ್ಷಕ ಪ್ರದೀಪ್ ಕೆ. ಇದ್ದರು.
ದಿನದ ವಿಶೇಷತೆ: ಬೂಟ್ ಕ್ಯಾಂಪ್ನಲ್ಲಿ ಪಿಸ್ತೂಲ್ ಮತ್ತು ಬಂದೂಕು ಶೂಟಿಂಗ್, ಬಿಲ್ಲುಗಾರಿಕೆ, ಮಂಕಿ ಬ್ರಿಡ್ಜ್, ಕಮಾಂಡೊ ಬ್ರಿಡ್ಜ್, ಸಿಂಗಲ್ ರೋಪ್ ಬ್ಯಾಲೆನ್ಸ್, ಮಂಕಿ ಸ್ವಿಂಗ್, ಮೈಂಡ್ ಗೇಮ್, ಟೈಯರ್ ಕೈಂಬಿಂಗ್, ಟೈಯರ್ ವೆಲ್ ಮುಂತಾದ ಮನರಂಜನೆ ಆಟಗಳ ಜೊತೆಗೆ 15ಕ್ಕೂ ಹೆಚ್ಚು ಸಾಹಸ ಆಟಗಳು ಹಾಗೂ ನೃತ್ಯ ತರಬೇತಿ ನಡೆಯಿತು.