
ಯಾದಗಿರಿ: ಕೊಂಡಾಪುರ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದೊಂದಿಗೆ ಬುಧವಾರ ಸಂಜೆ ಅದ್ದೂರಿಯಾಗಿ ನೆರವೇರಿತು.

j3tvkannada
ಗೂಡೂರ ಗ್ರಾಮದ ಭೀಮಾನದಿಯಲ್ಲಿ ಗಂಗಸ್ನಾನ ಮಾಡಿಕೊಂಡು ಬಂದು, ಬುಧವಾರ ವಿಶೇಷವಾದ ರುದ್ರಾಭಿಷೇಕ ಪೂಜೆ ಮತ್ತು ಗಣಾರಾಧನೆಯನ್ನು ನೆರವೇರಿಸಲಾಯಿತು.
ಸಂಜೆ ನಂದಿಕೋಲು ಸೇವೆಯನ್ನು ನೆರವೇರಿಸಿ, ನಂತರ ಬಸವೇಶ್ವರ ಮೂರ್ತಿಯನ್ನು ರಥದಲ್ಲಿಟ್ಟು ವೈಭವದ ರಥೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ದೇವಸ್ಥಾನದಿಂದ ಹೊರಟ ರಥೋತ್ಸವ ದೇವರ ಪಾದಗಟ್ಟೆಯನ್ನು ತಲುಪಿ ವಿಶೇಷ ಪೂಜೆ ಸಲ್ಲಿಸಿ ಹಿಂತಿರುಗಿ ಮೂಲಸ್ಥಾನಕ್ಕೆ ತಂದು ನಿಲ್ಲಿಸಲಾಯಿತು.

j3tvkannada
ನಂದಿ ಬಸವೇಶ್ವರ ಜೋಡು ರಥೋತ್ಸವ: ಬೆಳಗುಂದಿ ಗ್ರಾಮದಲ್ಲಿ ಬಸವೇಶ್ವರ ಜಯಂತಿ ಅಂಗವಾಗಿ ನಂದಿ ಬಸವೇಶ್ವರ ಜೋಡು ರಥೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು. ಮಂಗಳವಾರ ಸಂಜೆ ಉಚ್ಚಾಯ ಕಾರ್ಯಕ್ರಮ ನಡೆಯಿತು. ಬುಧವಾರ ಸಂಜೆ ಬಸವೇಶ್ವರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ರಥದ ಸುತ್ತಲು ಪ್ರದಕ್ಷಿಣಿ ಹಾಕಿದ ನಂತರ ರಥದಲ್ಲಿರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥವನ್ನು ಭಕ್ತರು ಸಡಗರದೊಂದಿಗೆ ರಥದ ಹಗ್ಗವನ್ನಿಡಿದು ನಾ ಮುಂದು ತಾ ಮುಂದು ಎನ್ನುವಂತೆ ನೂಕು ನುಗ್ಗಲಿನಲ್ಲಿ ದೇವರ ಪಾದಗಟ್ಟೆಯವರೆಗೆ ಎಳೆದು, ನಂತರ ಪುನಃ ರಥದ ಮೂಲಸ್ಥಾನಕ್ಕೆ ತಂದು ನಿಲ್ಲಿಸಿದ ಭಕ್ತರು ಜೈಘೋಷಣೆಗಳನ್ನು ಕೂಗುತ್ತ ಸಂಭ್ರಮಾಚರಣೆ ಮಾಡಿದರು.