
ಹಾಸನ: ಅರಕಲಗೂಡು ತಾಲ್ಲೂಕಿನ ದುಮ್ಮಿ ಮತ್ತು ಕೊರಟಿಕೆರೆ ಕಾವಲ್ ಗ್ರಾಮಗಳಲ್ಲಿ ಬುಧವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಮಳೆಯಿಂದ 15 ಮನೆಗಳ ಹೆಂಚು, ಶೀಟ್ಗಳು ಹಾರಿ ಹೋಗಿವೆ.

j3tvkannada
ವಿದ್ಯುತ್ ಕಂಬಗಳು ರಸ್ತೆ, ಮನೆಗಳ ಮೇಲೆ ಉರುಳಿ ಬಿದ್ದಿವೆ. ಹಲವೆಡೆ ಮರಗಳು ನೆಲಕ್ಕೆ ಉರುಳಿವೆ. ಮೇಲ್ಟಾವಣಿಯ ಮೇಲೆ ವಿದ್ಯುತ್ ಕಂಬ ಉರುಳಿ ಸ್ವಾಮಿ ಎಂಬುವವರ ಮನೆಗೆ ಹಾನಿಯಾಗಿದೆ. ಲಕ್ಷ್ಮೀಕಾಂತ್ ಎಂಬುವವರ ದನದ ಕೊಟ್ಟಿಗೆ ಶೀಟ್ ಹಾರಿ ಹೋಗಿದ್ದು, ಇಟ್ಟಿಗೆ ಮತ್ತು ಗಾರೆಯ ತುಂಡುಗಳು ಬಿದ್ದು ಜಾನುವಾರುಗಳಿಗೆ ಗಾಯವಾಗಿದೆ.