
ಯಾದಗಿರಿ: ಭಾರತೀಯ ಅಂಚೆ ಇಲಾಖೆಯ ಸಹಯೋಗದಲ್ಲಿ ಎಸ್.ಬಿ.ಐ ಹಾಗೂ ಇತರೆ ಸಂಸ್ಥೆಗಳಲ್ಲಿ ಸಾಮಾನ್ಯ ಜನತೆಗೆ ಕೈಗೆಟಕುವ ಮತ್ತು ಉತ್ತಮ ಭವಿಷ್ಯದ ದೃಷ್ಟಿಯಿಂದ ಹಲವು ಬಗೆಯ ವಿಮೆ ಸೌಲಭ್ಯಗಳನ್ನು ಪರಿಚಯಿಸಿದ್ದು, ಸೌಲಭ್ಯಗಳ ಲಾಭ ಪಡೆಯಬೇಕು ಎಂದು ಎಸ್.ಬಿ.ಐ ಅಧಿಕಾರಿ ವಿಜಯಕುಮಾರ ಕರೆ ನೀಡಿದರು.

j3tvkannada
ತಾಲ್ಲೂಕಿನ ಯಲಸತ್ತಿ ಗ್ರಾಮದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ವತಿಯಿಂದ ಆರ್ಥಿಕ ಸೇರ್ಪಡೆ ಶಿಬಿರ ಮತ್ತು ಅಂಚೆ ಇಲಾಖೆಯಲ್ಲಿ ವಿಮೆ ಪಡೆದಿದ್ದ ಫಲಾನುಭವಿ ಕುಟುಂಬಕ್ಕೆ ವಿಮೆ ಸೌಲಭ್ಯದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದ ದಾಳಿ ಸನ್ನಿಹಿತ ಅಸ್ತಿತ್ವಕ್ಕೆ ಅಪಾಯ ಬಂದರೆ ಅಪಘಾತ, ಅಕಾಲಿಕ ಮರಣ, ಅನಾರೋಗ್ಯದ ಸಂದರ್ಭಗಳಲ್ಲಾಗುವ ಅನಾಹುತದಿಂದ ಕುಟುಂಬದ ಇತರೆ ಸದಸ್ಯರ ಆರ್ಥಿಕ ಶಕ್ತಿಯೇ ಕುಸಿಯುತ್ತದೆ. ಕುಟುಂಬದ ಆರ್ಥಿಕ ಸ್ಥಿರತೆ ಗಮನದಲ್ಲಿಟ್ಟುಕೊಂಡು ವಿಮೆ ಮಾಡಿಸಿದರೆ ಕುಟುಂಬಕ್ಕೆ ಸಹಾಯವಾಗಲಿದೆ ಎಂದು ಹೇಳಿದರು.
ಎಸ್.ಬಿ.ಐ ಭಾರತೀಯ ಪೋಸ್ಟ್ನಲ್ಲಿ ಸಾಮಾನ್ಯ ಜನತೆಗೆ ಹೆಚ್ಚಿನ ಲಾಭ ನೀಡುವ ನಿಟ್ಟಿಲ್ಲಿ ವಿಮೆ ಸೌಲಭ್ಯಗಳಿವೆ. ಹತ್ತಿರದ ಅಂಚೆ ಕಚೇರಿ, ಎಸ್.ಬಿ.ಐ. ಶಾಖೆಗಳಲ್ಲಿ ಸಂಪೂರ್ಣ ಮಾಹಿತಿ ಸಿಗಲಿದ್ದು, ಇದರ ಲಾಭವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ತೋರಣತಿಪ್ಪ, ಪಿ.ಡಿ.ಒ ಗಿರಿಮಲ್ಲಣ್ಣ, ಪಂಚಾಯಿತಿ ಸದಸ್ಯರು, ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.