
ಬಳ್ಳಾರಿ: ಸಿರುಗುಪ್ಪ ತಾಲ್ಲೂಕಿನ ಮುದ್ದಟನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಅರಳಿಗನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಲಾಗಿದೆ.

j3tvkannada
ಮುದ್ದಟನೂರು ಗ್ರಾಮದಲ್ಲಿ ಶನಿವಾರ ಜೋಳ ಖರೀದಿ ಕೇಂದ್ರವನ್ನು ಸಹಕಾರ ಸಂಘದ ಅಧ್ಯಕ್ಷ ಟಿ.ಸೂರಿಬಾಬು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮುದ್ದಟ್ಟನೂರು, ರುದ್ರಪಾದ, ಮಣ್ಣೂರು, ಸೂಗುರು, ಚನ್ನಪಟ್ಟಣ, ಹಾವಿನಾಳು, ಸಿರಿಗೇರಿ, ವೀರಾಪುರ ಗ್ರಾಮಗಳ ಸುತ್ತಮುತ್ತ ರೈತರಿಗೆ ಈ ಖರೀದಿ ಕೇಂದ್ರದಿಂದ ಅನುಕೂಲವಾಗಲಿದೆ ಎಂದರು. ಪ್ರಸ್ತುತ ಸಿರುಗುಪ್ಪ ತಾಲ್ಲೂಕಿನಲ್ಲಿ ಇರುವ 10 ಖರೀದಿ ಕೇಂದ್ರಗಳ ಜೊತೆಗೆ ಎರಡು ಹೆಚ್ಚುವರಿ ನೋಂದಣಿ ಮತ್ತು ಖರೀದಿ ಕೇಂದ್ರ ತೆರೆಯಲಾಗಿದೆ. ಮುದ್ದಟನೂರು ಕೇಂದ್ರದಲ್ಲಿ ನೂರಕ್ಕು ಹೆಚ್ಚು ಟೋಕನ್ ವಿತರಿಸಲಾಯಿತು. ಅರಳಿಗನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 130 ಕ್ಕೂ ಹೆಚ್ಚು ಟೋಕನ್ ವಿತರಿಸಲಾಗಿದೆ ಎಂದು ಖರೀದಿ ಕೇಂದ್ರದ ಅಧಿಕಾರಿ ತಿಳಿಸಿದ್ದಾರೆ.