
ಕೊಪ್ಪಳ: ‘ಬಸ್ ನಿಲ್ದಾಣದ ಗೋಡೆಗಳಲ್ಲಿ ಬಿರುಕು, ನಿರ್ವಹಣೆಯಾಗದ ಶೌಚಾಲಯ, ಕಿತ್ತು ಬೀಳುವ ಚಾವಣಿ ಸಿಮೆಂಟ್ ಚಕ್ಕಳೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಮೂಲಸೌಲಭ್ಯಗಳ ಕೊರತೆ, ಸಂಪೂರ್ಣ ಶಿಥಿಲಗೊಂಡಿರುವ ಕಟ್ಟಡ ನಿಲ್ದಾಣದಲ್ಲಿ ಪ್ರಯಾಣಿಕರು ಆತಂಕದಲ್ಲಿಯೇ ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾದ ಪರಿಸ್ಥಿತಿಯಿದೆ.

j3tvkannada
1998ರಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣಕ್ಕಿಗೆ 27 ವರ್ಷ. ನಿತ್ಯ 148ಕ್ಕೂ ಹೆಚ್ಚು ಬಸ್ಗಳು ನಿಲ್ದಾಣಕ್ಕೆ ಬಂದು ಹೋಗುತ್ತವೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಸಾವಿರಾರು ಜನರು ನಿಲ್ದಾಣವನ್ನು ಬಳಸುತ್ತಿದ್ದಾರೆ. ಆದರೆ ನಿಲ್ದಾಣದಲ್ಲಿ ಸೌಲಭ್ಯಗಳು ಮಾತ್ರ ಶೂನ್ಯ. ನಿಲ್ದಾಣವು ಅವ್ಯವಸ್ಥೆಯಿಂದ ಕೂಡಿದ್ದು, ಹೆಣ್ಣುಮಕ್ಕಳಿಗೆ ಹಾಗೂ ಹಿರಿಯ ನಾಗರಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಪ್ರಯಾಣಿಕರು, ಶೌಚಾಲಯಗಳ ಬದಲು ನಿಲ್ದಾಣದ ಆವರಣದಲ್ಲಿಯೇ ಮೂತ್ರವಿಸರ್ಜನೆ ಮಾಡುತ್ತಿರುವ ಉದಾಹರಣೆಗಳಿವೆ. ಅಲ್ಲದೇ ಕರ್ತವ್ಯ ಮುಗಿಸಿದ ಬಳಿಕ ನಿರ್ವಾಹಕರು ಹಾಗೂ ಚಾಲಕರಿಗೆ ಉಳಿದುಕೊಳ್ಳಲು ಹಾಗೂ ವಿಶ್ರಾಂತಿ ಪಡೆಯಲು ಕೊಠಡಿಗಳಿಲ್ಲ. ನನಸಾಗದ ಹೈಟೆಕ್ ನಿಲ್ದಾಣದ ಕನಸು ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಬಸ್ ನಿಲ್ದಾಣಗಳು ಹೈಟೆಕ್ ಆಗಿ ರೂಪಾಂತರಗೊಂಡಿವೆ. ಎಲ್ಲ ಸೌಲಭ್ಯಗಳೊಂದಿಗೆ ಜನಸ್ನೇಹಿ ವ್ಯವಸ್ಥೆಗಳಿವೆ. ಆದರೆ ಹನುಮಸಾಗರದ ನಿಲ್ದಾಣಕ್ಕೆ ಈವರೆಗೂ ಹೈಟೆಕ್ ಆಗುವ ಭಾಗ್ಯ ಬಂದಿಲ್ಲ. ನಿಲ್ದಾಣವನ್ನು ನೆಲಸಮಗೊಳಿಸಿ, ಹೊಸ ನಿಲ್ದಾಣಕ್ಕೆ ಸಮೀಕ್ಷೆ ಮಾಡಲಾಗಿದೆ. ಆದರೆ ಪ್ರಕ್ರಿಯೆ ಆರಂಭವಾಗಿ ವರ್ಷಗಳು ಕಳೆದರೂ, ಕಾಮಗಾರಿ ಆರಂಭವಾಗಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯ, ಇಲ್ಲಿನ ಶಾಸಕರಾಗಲಿ, ಸ್ಥಳೀಯ ಮುಖಂಡರಾಗಲಿ ನಿಲ್ದಾಣದ ಅಭಿವೃದ್ಧಿಗೆ ಕಾಳಜಿ ತೋರದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಶೌಚಾಲಯ ನಿರ್ವಹಣೆ ಟೆಂಡರ್ ಪ್ರಕ್ರಿಯೆಯೂ ನಡೆದಿದೆ. ಆದರೆ ನಿರ್ವಹಣೆಯಾಗುತ್ತಿಲ್ಲ. ಶೌಚಾಲಯಗಳ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ನಿಲ್ದಾಣದ ಗೋಡೆಗಳ ಬಿರುಕು, ಛಾವಣಿ ಕುಸಿತದ ಭೀತಿ ಹಾಗೂ ಅಸಮರ್ಪಕ ನಿರ್ವಹಣೆಯಿಂದಾಗಿ ನಿಲ್ದಾಣ ಅಪಾಯಕರವಾಗಿದೆ.