
ರಾಯಚೂರು : ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ಪ್ರತ್ಯೇಕ ಘಟನೆಯಲ್ಲಿ ಸಿಡಿಲು ಬಡಿದು ವ್ಯಕ್ತಿ, ಎರಡು ಆಕಳು ಸ್ಥಳದಲ್ಲೇ ಮೃತಪಟ್ಟಿವೆ. ಮತ್ತು ಮನೆಗೆ ಹಾನಿಯಾಗಿದೆ.

j3tvkannada
ಸಿರವಾರ ತಾಲ್ಲೂಕಿನ ಕೆ.ಗುಡದಿನ್ನಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಸಾಯಣ್ಣ ಯಾದವ (52), ರಾಯಚೂರು ತಾಲ್ಲೂಕಿನ ಬಾಪೂರು ಗ್ರಾಮದಲ್ಲಿ ರೈತ ಸ್ವಾಮಿ ಯಾದವ ಅವರಿಗೆ ಸೇರಿದ ಆಕಳು ಹಾಗೂ ಮಾನ್ವಿ ತಾಲ್ಲೂಕಿನ ನೀರಮಾನ್ವಿ ಸಮೀಪದ ಮಿಟ್ಟಿ ಕ್ಯಾಂಪ್ನಲ್ಲಿ ಸಿಡಿಲು ಬಡಿದು ರೈತ ನರಸಪ್ಪ ಅವರಿಗೆ ಸೇರಿದ ಆಕಳು ಸಾವಿಗೀಡಾಗಿದೆ. ಮಾನ್ವಿಯ ಸೋನಿಯಾ ಗಾಂಧಿ ನಗರದಲ್ಲಿ ಸಿಡಿಲು ಬಡಿದು ಮನೆಯಲ್ಲಿಯ ನಿತ್ಯ ಬಳಕೆಯ ವಸ್ತುಗಳು ಬೆಂಕಿಗಾಹುತಿಯಾಗಿವೆ. ರಾಯಚೂರು ತಾಲ್ಲೂಕಿನ ನಾಗರದಿನ್ನಿ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದೆ.