
ಕಾಸರಗೋಡು: ರಾಜ್ಯದ ಎಲ್ಲ ಲೋಕೋಪಯೋಗಿ ರಸ್ತೆಗಳು ಶೀಘ್ರದಲ್ಲೇ ಬಿ.ಎಂ.ಬಿ.ಸಿ ಗುಣಮಟ್ಟಕ್ಕೆ ಏರಲಿವೆ ಎಂದು ಲೋಕೋಪಯೋಗಿ ಸಚಿವ ಎ.ಮುಹಮ್ಮದ್ ರಿಯಾಝ್ ತಿಳಿಸಿದರು.

j3tvkannada
ಜಿಲ್ಲೆಯ ಕಿಳಿಯಾಳಂ ನದಿಗೆ ನಿರ್ಮಿಸಲಾದ ಸೇತುವೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇದು ಕಾಞಂಗಾಡು ವಿಧಾನಸಭಾ ಕ್ಷೇತ್ರದ ಕಿನಾನೂರು-ಕರಿಂದಳಂ, ಕೋಡೋಂ-ಬೇಳೂರು ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸುವ ಬಾನಂಕ್ಯಾಡಂ ರಸ್ತೆಯಲ್ಲಿದೆ. 30 ಸಾವಿರ ಕಿ.ಮೀ ಉದ್ದದ ಲೋಕೋಪಯೋಗಿ ರಸ್ತೆಯ ಶೇ 60 ಭಾಗವೂ ಈ ಗುಣಮಟ್ಟಕ್ಕೇರಿವೆ. ಉಳಿದವು ಶೀಘ್ರದಲ್ಲೇ ಗುರಿತಲುಪಲಿವೆ ಎಂದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಾಜಿ ಸಂಸದ ಪಿ.ಕರುಣಾಕರನ್ ಜತೆಗಿದ್ದರು.