
ಮಂಡ್ಯ: ಪರಿಸರ ಮತ್ತು ಅರಣ್ಯ ನಾಶದಿಂದ ತಾಪಮಾನವೂ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ ಗಿಡ-ಮರಗಳ ರಕ್ಷಣೆಯ ಮೂಲಕ ಭೂಮಿಯನ್ನು ಉಳಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಕರೆ ನೀಡಿದರು.

j3tvkannada
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ವಿಶ್ವ ಭೂಮಿ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.1970ರಂದು ಅಮೇರಿಕಾದಲ್ಲಿ ಪರಿಸರ ಪ್ರೇಮಿಗಳು ಹಾಗೂ ನಾಗರೀಕರು ಮಾಲಿನ್ಯವನ್ನು ತಡೆಗಟ್ಟಿ ಭೂಮಿ ಉಳಿಸಬೇಕು ಎಂದು ಮುಷ್ಕರ ಆರಂಭಗೊಂಡಿತು. ಅಂತಹ ದಿನವನ್ನು ವಿಶ್ವ ಭೂಮಿ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು, ಭೂಮಿ ತಾಯಿಯನ್ನು ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ವಲಯ ಅರಣ್ಯಾಧಿಕಾರಿ ಮಧುರ ಮೂರ್ತಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮ ಜೀವನದ ಮುಖ್ಯ ಅಂಗವಾಗಬೇಕು. ಗಿಡಗಳನ್ನು ಉಳಿಸಿ ಬೆಳೆಸಲು ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು. ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಸುಂದರ್ ಮಾತನಾಡಿ, ಭೂಮಿತಾಯಿಯನ್ನು ಪೂಜಿಸಿ ಗೌರವಿಸಬೇಕು. ನಮಗೆ ನೀರು, ಚಿನ್ನ, ಅದಿರು, ಗಿಡವನ್ನು ನೆಟ್ಟರೇ ಫಲ ಹಾಗೂ ನೆರಳನ್ನು ಕೊಡುತ್ತಾಳೆ. ಎಲ್ಲವನ್ನು ಪಡೆಯುವ ನಾವು ಭೂಮಿಯ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್ ಕುಮಾರ್ ಶಿವಪೂಜಿ, ಉಪ ವಲಯ ಅರಣ್ಯ ಅಧಿಕಾರಿ ಎಚ್.ಎಸ್. ಶಿವರಾಜು, ವಕೀಲ ಶ್ರೀನಿವಾಸ ಕುಮಾರ್ ಪಾಲ್ಗೊಂಡಿದ್ದರು.