
ರಾಯಚೂರು: ಮುದಗಲ್ ಸಮೀಪದ ಬಾಬಾನಕಟ್ಟೆಯ ಮಾನಸಿಕ ಅಸ್ವಸ್ಥ ಮಹ್ಮದ್ ಯೂಸುಫ್ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಿ ಎಸ್ ಐ ವೆಂಕಟೇಶ ಮಾಡಗೇರ ತಿಳಿಸಿದರು.

j3tvkannada
ಭಾನುವಾರ ತಡರಾತ್ರಿ ಚಾಕುವಿನಿಂದ ಕುತ್ತಿಗೆಗೆ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ ನಾಲ್ಕು ವರ್ಷಗಳ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಹೊಸಪೇಟೆ, ಧಾರವಾಡ, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮಾತ್ರೆ ಸೇವಿಸುತ್ತಿದ್ದರು. ಮೂಛೆ೯ ರೋಗಕ್ಕೂ ಮಾತ್ರೆ ಸೇವಿಸುತ್ತಿದ್ದರು. ನಾಲ್ಕು ತಿಂಗಳುಗಳಿಂದ ಮಾತ್ರೆ ಸೇವಿಸುವುದನ್ನು ನಿಲ್ಲಿಸಿದ್ದರು. ಮಾನಸಿಕ ಸೀಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.