
ಚಿಕ್ಕಮಗಳೂರು: ಭಾನುವಾರ ರಾತ್ರಿ ಸುರಿದ ಮಳೆ-ಗಾಳಿಯಿಂದ ತಾಲ್ಲೂಕಿನ ಬೋಕಿಕೆರೆ ಗ್ರಾಮದ ಕೆಲವು ಮನೆಗಳಿಗೆ ಹಾನಿಯಾಗಿದೆ. ಗಾಳಿ-ಮಳೆಯಿಂದ ಬೋಕಿಕೆರೆ ಗ್ರಾಮದ ಮಹದೇವಪ್ಪ ಅವರ ತಗಡಿನ ಶೀಟ್ ಕಳಚಿದೆ. ಚಂದ್ರಶೇಖರ್, ರಾಜಪ್ಪ, ಸತೀಶ್, ಜಯಣ್ಣನವರ ಮನೆ ಚಾವಣಿಗೆ ಹಾನಿಯಾಗಿದೆ. ಹೆಂಚುಗಳು ಹಾರಿಹೋಗಿವೆ. ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚೇತನ್ ಅವರಿಗೆ ಸೇರಿದ ಹಸು, ಸಿಡಿಲು ಬಡಿದು ಮೃತಪಟ್ಟಿದೆ.
ಗಾಳಿ- ಮಳೆಗೆ ತಾಲ್ಲೂಕಿನ ಬಗ್ಗವಳ್ಳಿ ಗ್ರಾಮದಲ್ಲಿ ಮರದ ಕೊಂಬೆಗಳು ಉರುಳಿವೆ.

j3tvkannada
ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಬಗ್ಗವಳ್ಳಿ, ಬುಕ್ಕಾಂಬುಧಿ, ಶಿವನಿ ಆರ್.ಎಸ್ ಸೇರಿದಂತೆ ಹಲವು ಗ್ರಾಮಗಳಲ್ಲಿ ರಾತ್ರಿಯಿಡೀ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮಳೆ, ರೈತರಿಗೆ ಖುಷಿ ತಂದಿದೆ. ಅಡಿಕೆ-ಬಾಳೆ, ತೆಂಗಿನ ತೋಟ ಹೊಂದಿರುವ ಕೃಷಿಕರ ಮೊಗದಲ್ಲಿ ಸಂತೋಷ ಮೂಡಿಸಿದೆ. ಖುಷ್ಕ ಜಮೀನು ಹೊಂದಿರುವರಿಗೆ ಹೊಲ ಹಸನು ಮಾಡಲು ಹದ ಮಳೆ ಅನುಕೂಲ ಮಾಡಿಕೊಟ್ಟಿತು.