
ಬಳ್ಳಾರಿ(ಕಂಪ್ಲಿ): ಗ್ರಾಮೀಣ ಬಡಜನರ ಜೀವನಮಟ್ಟ ಸುಧಾರಣೆಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಹಕಾರಿ ಆಗಿದೆ, ಎಂದು ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಕೆ.ಎಸ್. ಮಲ್ಲನಗೌಡ ಹೇಳಿದರು.

j3tvkannada
ತಾಲ್ಲೂಕಿನ ರಾಮಸಾಗರ ಗ್ರಾಮದ ಹೊರವಲಯದಲ್ಲಿ ನಡೆದ ನರೇಗಾ ಕಾಮಗಾರಿ ಸ್ಥಳದಲ್ಲಿ ನರೇಗಾ(ರೋಜಗಾರ) ದಿನಾಚರಣೆಯಲ್ಲಿ ಅವರು ಮಾತನಾಡಿದರು. ಬಳಿಕ ಕೆಲಸಕ್ಕೆ ಹಾಜರಾದ ಕೂಲಿ ಕಾರ್ಮಿಕರ ಹಾಜರಾತಿ ಪರಿಶೀಲಿಸಿದರು. ಗರ್ಭಿಣಿಯರು, ಅಂಗವಿಕಲರು, ಹಿರಿಯ ನಾಗರಿಕರಿಗೆ ಕೆಲಸದ ಪ್ರಮಾಣದಲ್ಲಿ ಶೇ 50ರಷ್ಟು ರಿಯಾಯಿತಿ ಇದ್ದು, ಸದುಪಯೋಗ ಪಡೆಯಬೇಕು. ಉದ್ಯೋಗ ಚೀಟಿಗಳನ್ನು ಅಪ್ಲೇಟ್ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಿದರು.
ಪಿ.ಡಿ.ಒ ಹನುಮಂತಪ್ಪ, ಟಿ.ಸಿ ಸಂಗಮೇಶ, ಟಿ.ಎ.ಇ ಅಂಜಿನಪ್ಪ, ಡಿ.ಇ.ಒ ನಿಧಿ, ಬಿ.ಎಫ್.ಟಿ ಬಾಷ, ಜಿ.ಕೆ.ಎಂ ರೇಣುಕಮ್ಮ, ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.