
ಚಿಕ್ಕಮಗಳೂರು: ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೃಂಗೇರಿಯ ಈಡಿಗರ ಸಂಘವು ಹಲವು ವರ್ಷಗಳಿಂದ ನೆರವಾಗುತ್ತಿದೆ. 13 ವರ್ಷದಿಂದ ಪ್ರತಿಭಾವಂತರ ಶೈಕ್ಷಣಿಕ ವೆಚ್ಚ ಭರಿಸುತ್ತಿರುವ ಸಂಘವು, ಪ್ರಸ್ತುತ ₹4.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ‘ಈಡಿಗರ ಸಮುದಾಯ ಭವನ’ದ ಲೋಕಾರ್ಪಣೆ ಕಾರ್ಯಕ್ರಮ ಏ.20ರಂದು ನಡೆಯಲಿದೆ. 1974ರಲ್ಲಿ ಎಂ.ಎಸ್.ಪುಟ್ಟಸ್ವಾಮಿ ಮಾಣಿಬೈಲು ಅವರು ಗುಬ್ಬಗೋಡಿನಲ್ಲಿ ಈಡಿಗರ ಸಂಘ ಸ್ಥಾಪಿಸಿದ್ದರು. 1995ರಿಂದ 2003ರವರೆಗೆ ಜಿ.ಆರ್.ಸುಬ್ರನಾಯ್ಕ, 2003ರಿಂದ 2012ರವರೆಗೆ ಬಿ.ಎಚ್.ಲಕ್ಷ್ಮಣ್ ನಾಯ್ಕ ಬೋಳುಗೋಡು ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. 2012ರಿಂದ ಅಗಸವಳ್ಳಿ ಎ.ಆರ್.ನಾರಾಯಣ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.

j3tvkannada
ಇದೀಗ ಸಂಘವು ನಾಲ್ಕು ಮಹಡಿಯ ಸ್ವಂತ ಕಟ್ಟಡ ಹೊಂದಿದೆ. 1986ರಲ್ಲಿ ಸ್ಥಳ ಮಂಜೂರಾತಿ ಪಡೆದಿದ್ದು, ಕಟ್ಟಡದ 2015ರಲ್ಲಿ ಶಿಲಾನ್ಯಾಸ ಮಾಡಲಾಗಿತ್ತು. ಸಮುದಾಯ ಭವನ ನಿರ್ಮಿಸಲು ರಾಜ್ಯಸಭಾ ಸದಸ್ಯರಾಗಿದ್ದ ಬಿ.ಕೆ.ಹರಿಪ್ರಸಾದ್ 25 ಲಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ₹2 ಲಕ್ಷ, ಶಾಸಕ ಟಿ.ಡಿ.ರಾಜೇಗೌಡ ₹20 ಲಕ್ಷ, ಮಾಜಿ ಶಾಸಕ ಡಿ.ಎನ್.ಜೀವರಾಜ್ ₹ 50 ಲಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ₹10 ಲಕ್ಷ, ಸಂಸದೆ ಶೋಭಾ ಕರಂದ್ಲಾಜೆ ₹ 2.5 ಲಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ನಿಧಿಯಿಂದ ₹ 40 ಲಕ್ಷ ಸೇರಿ ಸರ್ಕಾರದಿಂದ 1.5 ಕೋಟಿ ಅನುದಾನ ಪಡೆಯಲಾಗಿದೆ. ₹ 3 ಕೋಟಿಯನ್ನು ದಾನಿಗಳು, ಸಮುದಾಯದವರು ದೇಣಿಗೆಯಾಗಿ ನೀಡಿದ್ದಾರೆ. 2ನೇ ಮಹಡಿಯಲ್ಲಿ ವಿದ್ಯಾರ್ಥಿ ನಿಲಯ ಕಲ್ಪಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ, ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಂಘವು ನೆರವು ನೀಡುತ್ತಿದೆ.
ಸಂಘದ ನೆರವು ಪಡೆದು ವಿದ್ಯಾಭ್ಯಾಸ ಮಾಡಿದವರು ಉದ್ಯೋಗ ಪಡೆದು ಸಂಘದ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ. ಸಂಘದ ಕಾರ್ಯದರ್ಶಿಗಳಾಗಿ ಎಸ್.ಎ.ಕೃಷ್ಣಪ್ಪ, ಎ.ಎಸ್.ವೆಂಕಟೇಶ್ ಅಗಸೋಳ್ಳಿ, ಎಚ್.ಜಿ.ಗಿರೀಶ್ ಹೆಸ್ತೂರು, ಜಿ.ಎಸ್.ದಿನೇಶ್ ಗುಣಿತಲು, ಗುಬ್ಬಗೋಡು ಜಿ.ಎನ್.ಸುಬ್ರಹ್ಮಣ್ಯ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಕಾರ್ಯಕಾರಿ ಮಂಡಳಿಯಲ್ಲಿ ಅಧ್ಯಕ್ಷರಾಗಿ ಅಗಸವಳ್ಳಿ ಎ.ಆರ್.ನಾರಾಯಣ್, ಉಪಾಧ್ಯಕ್ಷರಾಗಿ ಎಚ್.ವಿ.ರಾಮಸ್ವಾಮಿ ಹೆಗ್ಗೂರು, ಎಚ್.ಆರ್.ವಿಷ್ಣುಮೂರ್ತಿ ಹಣಗಲು, ಪ್ರಧಾನ ಕಾರ್ಯದರ್ಶಿಗಳಾಗಿ ಜಿ.ಎಸ್.ಸುಬ್ರಹ್ಮಣ್ಯ ಗುಬ್ಬಗೋಡು, ಸಂಘಟನಾ ಕಾರ್ಯದರ್ಶಿಯಾಗಿ ಎಚ್.ಡಿ.ಶಿವಕುಮಾರ್ ಗದ್ದೆಮನೆ, ಸಹ ಕಾರ್ಯದರ್ಶಿ ಕೆ.ಎಸ್.ಚಿನ್ನಯ್ಯ ಕೊಂಡಗೇರಿ, ಸದಸ್ಯರಾಗಿ ಬಿ.ಎಚ್.ಲಕ್ಷ್ಮಣ್ ನಾಯ್ಕ ಬೋಳುಗೋಡು, ಎಂ.ಎಸ್.ಚಂದ್ರಪ್ಪ ಮಲ್ನಾಡು, ಎಚ್.ಜಿ.ಗಿರೀಶ್ ಹೆಸ್ತೂರು, ಜಿ.ಎಸ್.ದಿನೇಶ್ ಗುಣಿತಲು, ಜಿ.ಪಿ.ಪ್ರಕಾಶ ಕುಂಬಳಿಕೊಪ್ಪ, ಟಿ.ಎಸ್.ಗೋಪಾಲ ತೋರೊಳ್ಳಿ, ಲಿಂಗಪ್ಪ ನಾಗಪ್ಪ ನಾಯ್ಕ ತೋರೊಳ್ಳಿ, ಎಂ.ಪಿ.ಸತೀಶ್ರಾಜ್ ಮಾಣಿಬೈಲು, ಕೆ.ಕೆ.ಶಿವಕುಮಾರ್ ಕದ್ದೋಡಿ, ಕೆ.ಜಿ.ನಂದೀಶ್ ಕೊಚ್ಚಾರು, ಸಂಸ್ಥಾಪಕ ಕಾರ್ಯದರ್ಶಿ ಎ.ಎಸ್.ವೆಂಕಟೇಶ್ ಅಗಸವಳ್ಳಿ ಕತವ್ಯ ನಿರ್ವಹಿಸುತ್ತಿದ್ದಾರೆ.

j3tvkannada
ಏ.20ರಂದು ನಡೆಯುವ ಕಾರ್ಯಕ್ರಮದಲ್ಲಿ ಸೋಲೂರಿನ ನಾರಾಯಣ ಗುರು ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ, ಗೌರಿಗದ್ದೆ ದತ್ತಾತ್ರೇಯ ಪೀಠದ ವಿನಯ ಗುರೂಜಿ, ನಿಟ್ಟೂರಿನ ನಾರಾಯಣ ಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಶ್ರೀಕ್ಷೇತ್ರ ಸಿಗಂದೂರಿನ ಧರ್ಮಾಧಿಕಾರಿ ರಾಮಪ್ಪ ಭಾಗವಹಿಸುವರು.ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕಾರ್ಯಕ್ರಮ ಉದ್ಘಾಟಿಸುವರು. ಮಹಾದ್ವಾರವನ್ನು ಶಿಕ್ಷಣ ಸಚಿವ ಮಧುಬಂಗಾರಪ್ಪ, ವಿದ್ಯಾರ್ಥಿ ನಿಲಯವನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಪಾಕ ಶಾಲೆಯನ್ನು ಶಾಸಕ ಟಿ.ಡಿ ರಾಜೇಗೌಡ, ಸಭಾ ಭವನವನ್ನು ಮಾಜಿ ಶಾಸಕ ಡಿ.ಎನ್.ಜೀವರಾಜ್, ಭೋಜನ ಶಾಲೆಯನ್ನು ಜೆ.ಪಿ.ಸುಧಾಕರ್ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಎ.ಆರ್.ನಾರಾಯಣ್ ಅಧ್ಯಕ್ಷತೆ ವಹಿಸುವರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನಿಲ್ಕುಮಾರ್, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ, ಮುಖಂಡರಾದ ಸುಧಾಕರ ಶೆಟ್ಟಿ ಭಾಗವಹಿಸಲಿದ್ದಾರೆ. ಸಂಘದ ಸ್ಥಾಪಕ ಅಧ್ಯಕ್ಷ ಮಾಣಿಬೈಲು ಪುಟ್ಟಸ್ವಾಮಿ ಅವರ ಶ್ರಮ ಈಗ ನೂರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಸಂಘದಿಂದ ನೆರವು ಪಡೆದ ವಿದ್ಯಾರ್ಥಿಗಳು ಈಗ ಉದ್ಯೋಗ ಮಾಡುತ್ತಿದ್ದು, ಅವರೂ ಸಂಘದ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಸಂಘದ ಈಡಿಗರ ಸಮುದಾಯ ಭವನ ಉದ್ಘಾಟನೆಗೊಳ್ಳುತ್ತಿರುವುದಿಂದ ನಮ್ಮೇಲ್ಲರ ಬಹುದಿನದ ಕನಸು ನನಸಾಗುತ್ತಿದೆ ಎಂದು ಈಡಿಗರ ಸಂಘದ ಅಧ್ಯಕ್ಷ ಅಗಸವಳ್ಳಿ ಎ.ಆರ್. ನಾರಾಯಣ್ ಹೇಳಿದರು.