
ಉತ್ತರ ಕನ್ನಡ: ‘ಜಿಲ್ಲೆಯಲ್ಲಿ ಗೋವು ಕಳವು, ಗೋಮಾಂಸ ಸಾಗಾಟ, ಗೋ ವಧೆ ಪ್ರಕರಣಗಳನ್ನು ಭೇದಿಸಲು ಪೊಲೀಸ್ ಇಲಾಖೆ ಆದ್ಯತೆ ನೀಡುತ್ತಿದ್ದು, ಐದು ವರ್ಷದಲ್ಲಿ 324 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.

j3tvkannada
2020 ರಿಂದ 2025ರವರೆಗೆ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ 193, ಗೋಮಾಂಸ ಸಾಗಾಟದ 56 ಸೇರಿದಂತೆ 252 ಪ್ರಕರಣ ದಾಖಲಿಸಿದ್ದು 657 ಜನರನ್ನು ಬಂಧಿಸಲಾಗಿದೆ. 1,221 ಗೋವುಗಳನ್ನು ರಕ್ಷಣೆ ಮಾಡಲಾಗಿದೆ. 16,933 ಕೆ.ಜಿಯಷ್ಟು ಗೋಮಾಂಸ ವಶಕ್ಕೆ ಪಡೆಯಲಾಗಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ಗೋವು ಕಳವಿಗೆ ಸಂಬಂಧಿಸಿದಂತೆ 32 ಪ್ರಕರಣಗಳು ಐದು ವರ್ಷದಲ್ಲಿ ದಾಖಲಾಗಿದ್ದು, 43 ಜನರನ್ನು ಬಂಧಿಸಲಾಗಿತ್ತು. ಕಳುವಾಗಿದ್ದ 35 ಗೋವುಗಳ ಪೈಕಿ 16ನ್ನು ಮಾತ್ರ ಪತ್ತೆ ಹಚ್ಚಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ‘ಭಟ್ಕಳ ತಾಲ್ಲೂಕಿನ ಹೆಬಳೆಯ ವೆಂಕಟಾಪುರ ನದಿಯಂಚಿನಲ್ಲಿ ಗೋವು ಹತ್ಯೆ ನಡೆಸಿದ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದೂ ಹೇಳಿದ್ದಾರೆ.