

j3tvkannada
ಚಿಕ್ಕಮಗಳೂರು: ಮಹಿಳೆಗೆ ನಕಲಿ ನೋಟು ನೀಡಿ ಕುರಿಗಳನ್ನು ಖರೀದಿಸಿ ವಂಚಿಸಿರುವ ಪ್ರಕರಣ ಸಖರಾಯಪಟ್ಟಣ ಠಾಣೆಯಲ್ಲಿ ದಾಖಲಾಗಿದೆ. ನಿಡಘಟ್ಟ ಗ್ರಾಮದ ಹೇಮಾವತಿ ಎಂಬುವರು ಕುರಿ ಸಾಕಾಣಿಕೆ ಮಾಡಿ ಜೀವನ ನಡೆಸುತ್ತಿದ್ದು, ಅಪರಿಚಿತ ವ್ಯಕ್ತಿಗಳು ಬಂದು ಕುರಿಗಳನ್ನು ಖರೀದಿಸಿದ್ದರು.
ಅವರು ನೀಡಿದ್ದ ₹25 ಸಾವಿರ ನಗದು ತಂದು ಬ್ಯಾಂಕಿಗೆ ಪಾವತಿಸಲು ಹೇಮಾವತಿ ಬಂದಾಗ ಅದರಲ್ಲಿ ₹500 ಮುಖಬೆಲೆಯ 28 ನೋಟುಗಳು(₹14 ಸಾವಿರ) ನಕಲಿ ಎಂಬುದು ಗೊತ್ತಾಗಿದೆ. ಬ್ಯಾಂಕಿನ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದು, ಪ್ರಕಟಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.