
ಯಾದಗಿರಿ: ಗ್ರಾಮದಲ್ಲಿರುವ ಹಜರತ್ ಶಾ ಖಾಜಾ ಬಂದೇನವಾಜ್ ದರ್ಗಾ ಹಿಂದೂ-ಮುಸ್ಲಿಂ ಸಮುದಾಯದವರ ಶ್ರದ್ಧಾ-ಭಕ್ತಿಯ ಕೇಂದ್ರ ಹಾಗೂ ಭಾವೈಕ್ಯದ ಪ್ರತೀಕವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಪಟ್ಟಣದ ಜಾಮೀಯಾ ಮಸೀದಿಯಿಂದ ಸಂಜೆ ನಡೆದ ಗಂಧ ಮೆರವಣಿಗೆ ಹಜರತ್ ಶಾ ಖಾಜಾ ಬಂದೇನವಾಜ್ ದರ್ಗಾಕ್ಕೆ ತಲುಪಿತು. ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದ ನಂತರ ಹಫೀಜ್ ಶೇಖ್ ಸೈದಾಪುರ, ಇಬ್ರಾಹಿಂ ಶೇಖ್ ರಾಂಪುರ, ಇಸಾಖ್ ಶೇಕ್ ಬಾಲಚೇಡ, ನಬೀಚಾಂದ್ ಸೈದಾಪುರ ಅವರು ಗದ್ದುಗೆಗೆ ಗಂಧ ಧರಿಸುವ ಮೂಲಕ ಉರುಸ್ಗೆ ಚಾಲನೆ ನೀಡಿದರು.

j3tvkannada
ಗ್ರಾಮದಿಂದ ಹೊರಟ ಜ್ಯೋತಿ ಗುರುವಾರ ಬೆಳಿಗ್ಗೆ ದರ್ಗಾ ತಲುಪಿತು. ಸಂಜೆ ಕೈಕುಸ್ತಿ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಆಗಮಿಸಿದ್ದರು. ಗ್ರಾಮ ಪಂಚಾಯಿತಿಯಿಂದ ಉರುಸ್ಗೆ ಸಕಲ ಸಿದ್ದತೆ. ಬಂದೇನವಾಜ್ ಉರುಸ್ ಹಿನ್ನಲೆಯಲ್ಲಿ ಗ್ರಾಮಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ಒದಗಿಸಿಕೊಟ್ಟಿದೆ. ಬೀದಿಗಳಲ್ಲಿ ದೀಪದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬ್ಲೀಚಿಂಗ್ ಪೌಡರ್, ಭಕ್ತರು ತಂಗಲು ಜಂಗಲ್ ಕಟಿಂಗ್ ಸೇರಿದಂತೆ ದರ್ಗಾದಲ್ಲಿ ಕೂಡ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ರಡ್ಡೆಪ್ಪ ಸೈದಾಪುರ ತಿಳಿಸಿದರು.