

j3tvkannada
ವಿಜಯನಗರ: ಇತ್ತೀಚೆಗೆ ಹಲವಾರು ಕಡೆಗಳಲ್ಲಿ ಅಕಾಲಿಕ ಮಳೆಯಿಂದಾಗಿ ಹಲವಾರು ನಷ್ಟಗಳಾಗುತ್ತಿವೆ. ಬೆಳೆಹಾನಿ ಜೊತೆಗೆ ಸಿಡಿಲು ಗುಡುಗುಗಳ ಆರ್ಭಟಕ್ಕೆ ಜೀವಹಾನಿಯೂ ಆಗುತ್ತಿದೆ.
ಅದರಂತೆ ನಿನ್ನೆ ಹೂವಿನಹಡಗಲಿ ತಾಲ್ಲೂಕಿನ ಅಂಗೂರು, ಬ್ಯಾಲಹುಣ್ಣಿ ಗ್ರಾಮಗಳಲ್ಲಿ ರಾತ್ರಿ ಸುರಿದ ಗಾಳಿ ಮಿಶ್ರಿತ ಮಳೆಯಿಂದ 50 ಎಕರೆ ಭತ್ತದ ಬೆಳೆ ಹಾನಿಗೀಡಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಕೂಡ್ಲಿಗಿ ತಾಲ್ಲೂಕಿನ ಸಾಸಲವಾಡ ಗ್ರಾಮದಲ್ಲಿ ಭಾರೀ ಗಾಳಿ, ಮಳೆಯಿಂದ ಗೋಡೆ ಕುಸಿದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಸಾಸಲವಾಡ, ಈಚಲಬೊಮ್ಮನಹಳ್ಳಿ, ಕುಪ್ಪಿನಕೆರೆ ಗ್ರಾಮಗಳಲ್ಲಿ ಗಾಳಿಯಿಂದ 9 ಎಕರೆಗೂ ಹೆಚ್ಚು ವೀಳ್ಯದೆಲೆ ತೋಟ ಮತ್ತು 10 ಎಕರೆಗೂ ಹೆಚ್ಚು ಪಪ್ಪಾಯಿ ತೋಟ ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕುಪ್ಪಿನಕೆರೆ ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ.