

j3tvkannada
ವಿಜಯನಗರ: ತುಂಗಭದ್ರಾ ಅಣೆಕಟ್ಟೆ ಸಮೀಪದ ಗುಡ್ಡದಲ್ಲಿ ನಿನ್ನೆ ಸಂಜೆ ಕಾಳಿಚ್ಚು ಕಾಣಿಸಿದ್ದು, ಅದನ್ನು ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ನಿರತರಾಗಿದ್ದಾರೆ. ತುಂಗಭದ್ರಾ ಜಲಾಶಯದ ಬಲದಂಡೆಯ ಮೇಲೆ ಗುಡ್ಡಗಳ ಶ್ರೇಣಿಯಿದ್ದು, ಒಂದು ಗುಡ್ಡದ ಮೇಲೆ ವೈಕುಂಠ ಅತಿಥಿಗೃಹ ಮತ್ತು ಪವನ ವಿದ್ಯುತ್ ಯಂತ್ರಗಳಿವೆ. ವಿಜಯನಗರ-ಚಿತ್ರದುರ್ಗ ಹೆದ್ದಾರಿ ಪಕ್ಕದ ಇನ್ನೊಂದು ಗುಡ್ಡದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಅಲ್ಲೂ ಒಂದು ಪವನ ವಿದ್ಯುತ್ ಯಂತ್ರವಿದೆ. ಗಾಳಿಯ ರಭಸಕ್ಕೆ ಪವನ ವಿದ್ಯುತ್ ಯಂತ್ರದ ರೆಕ್ಕೆಗಳು ತಿರುಗುತ್ತಿರುವಂತೆಯೇ ಬೆಂಕಿಯು ವ್ಯಾಪಿಸುತ್ತಿದೆ. ಇದು ಅರಣ್ಯ ಇಲಾಖೆಗೆ ಸೇರಿದ ಪ್ರದೇಶ ಅಲ್ಲ. ಆದರೆ, ಅಲ್ಲಿ ಕಾಡುಪ್ರಾಣಿಗಳು ಇವೆ. ಅವುಗಳ ಜೀವಕ್ಕೆ ಅಪಾಯ ಆಗಬಾರದು ಎಂಬ ಕಾರಣಕ್ಕೆ ಅಗ್ನಿಶಾಮಕ ಸಿಬ್ಬಂದಿ ಜತೆಗೆ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಕಿಡಿಗೇಡಿಗಳು ಬೆಂಕಿ ಹೆಚ್ಚಿರುವ ಸಾಧ್ಯತೆಯಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್ ತಿಳಿಸಿದರು.