

j3tvkannada
ಯಾದಗಿರಿ : ಬದಲಾದ ಜೀವನ ಕ್ರಮದಲ್ಲಿ ಆರೋಗ್ಯಕ್ಕೆ ಮಹತ್ವ ನೀಡಬೇಕಾದ ಅಗತ್ಯವಿದೆ ಎಂದು ಡಾ.ರಶ್ಮಿ.ಸಿ ಅವರು ತಿಳಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯುಷ್ ಇಲಾಖೆ ಮತ್ತು ಸ್ಪರ್ಶ ಚಾರಿಟಬಲ್ ಟ್ರಸ್ಟ್, ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿ, ಉತ್ತಮ ದಿನಚರಿಯೊಂದಿಗೆ ಶ್ರಮವಹಿಸಿ ಕೆಲಸ ಮಾಡಿದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರಕುಮಾರ ಹಾಗೂ ನಾಗರೆಡ್ಡಿ ಅವರು ಕಾರ್ಯಕ್ರಮಕ್ಕೆಯನ್ನು ಚಾಲನೆ ನೀಡಿದರು. ಡಾ.ಲಿಖಿತ, ಡಾ.ರಾಜು, ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಾಬಣ್ಣ, ವೆಂಕಟ್ರಮಣ ಗಟ್ಲ, ಸೀಮೆನ್, ರೆಡ್ಡಿ, ರಾಜು ಕುಮಾರ್, ಶರಣಪ್ಪ ಬೈರಂಕೊಂಡ, ಯೂನಸ್ ಧರೇಮಿ, ಶರಣುಗೌಡ, ಬಸವರಾಜಪ್ಪ ಅರ, ವಸಂತ, ಚನ್ನಬಸಪ್ಪ, ಶೋಭಾ, ಉಮಾ, ಅಕ್ಷತಾ, ಅಖಿಲೇಶ, ಶಿವಕುಮಾರ, ಮಹೇಶ್ವರಿ, ಮೊನೆಷ್ ಪಂಚಾಲ್, ಬನಶಂಕರ, ಶಿವ ಶಂಕರ, ಶರಣುಕುಮಾರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಶಿಬಿರದಲ್ಲಿ ಸುಮಾರು 85 ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡಲಾಯಿತು.