
ಹಾವೇರಿ :ನವಯುಗದ ಪ್ರವರ್ತಕ ಅಂಬೇಡ್ಕರ್ ಅವರು ಮಹಾಮೇಧಾವಿ. ಅವರ ಆದರ್ಶ ಜೀವನ ನಮಗೆಲ್ಲ ಮಾದರಿಯಾಗಬೇಕು’ ಎಂದು ಬಿ.ಇ.ಡಿ ಕಾಲೇಜಿನ ಪ್ರಾಚಾರ್ಯ ಎಂ.ಎಂ.ಮೃತ್ಯುಂಜಯ ಹೇಳಿದರು.

j3tvkannada
ನಗರದ ಬಿ.ಎ.ಜೆ.ಎಸ್.ಎಸ್ ಬಿ.ಇ.ಡಿ ಕಾಲೇಜಿನಲ್ಲಿ ಸೋಮವಾರ ಬಿ.ಇ.ಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಂದ ಏರ್ಪಡಿಸಿದ ಭೀಮ ಹೆಜ್ಜೆ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು..ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ಪರಶುರಾಮ ಪವಾರ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ಇರುವ ಹೆದ್ದಾರಿ, ಜಾತಿ ನಿರ್ಮೂಲನೆ ಧರ್ಮದ ಮೂಢನಂಬಿಕೆಗಳು. ಇವುಗಳನ್ನು ತೊಡೆದು ಹಾಕಿ ನವಸಮಾಜದ ನಿರ್ಮಾಣವಾಗಬೇಕು ಎಂದರು.
ಪ್ರಶಿಕ್ಷಣಾರ್ಥಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರ ಹಿಡಿದು ಭೀಮ ಹೆಜ್ಜೆ ಹಾಕಿದರು. ನಂತರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಅಂಬೇಡ್ಕರ್ ಕುರಿತು ಜಯಘೋಷ ಕೂಗಿದರು. ಪ್ರೊ.ಶಿವಕುಮಾರ ಬಿಸಲಳ್ಳಿ ಪ್ರೊ.ಎ.ಶಂಕರನಾಯ್ಕ, ಪ್ರೊ.ಶ್ರೀಕಾಂತ ಗೌಡಶಿವಣ್ಣನವರ, ಆಶಾಕುಮಾರಿ, ಲಕ್ಷ್ಮೀ ಹಣಚಿಕ್ಕಿ, ಉಮಾ ಕಂಬಳಿ, ಬೀರಪ್ಪ ಲಮಾಣಿ, ಭಾರತಿ ಇದ್ದರು.