
ಮದ್ದೂರು : ಗ್ರಾಮದೇವತೆ ಮದ್ದೂರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಭಾರಿ ದನಗಳ ಜಾತ್ರೆ ಆರಂಭವಾಗಿದ್ದು, ವಿವಿಧ ಪ್ರದೇಶಗಳಿಂದ ರೈತರು ಜಾನುವಾರುಗಳೊಂದಿಗೆ ಬರುತ್ತಿದ್ದಾರೆ.

j3tvkannada
ಮದ್ದೂರಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಇದೇ ಏ.15ರಂದು ಬಂಡಿ ಉತ್ಸವ ನಡೆಯಲಿದ್ದು, ಏ. 16ರಂದು ಕೊಂಡ ಮಹೋತ್ಸವ, ಏ.17ರಂದು ಸಿಡಿ ಮಹೋತ್ಸವ ಹಾಗೂ ಏ.19ರಂದು ಉಗ್ರ ನರಸಿಂಹಸ್ವಾಮಿ ರಥೋತ್ಸವವು ನಡೆಯಲಿದೆ. ಪಟ್ಟಣದ ಪೇಟೆಬೀದಿ, ಸಂಜಯ ಚಿತ್ರಮಂದಿರದ ಬಳಿ, ಶಿಂಷಾ ಸಹಕಾರ ಬ್ಯಾಂಕ್ ಬಳಿ, ತಾಲ್ಲೂಕು ಕಚೇರಿಯ ಹಿಂಭಾಗ, ತಾಲ್ಲೂಕು ಕ್ರೀಡಾಂಗಣದ ಬಳಿ ಸೇರಿದಂತೆ ಹಲವು ಕಡೆಗಳಲ್ಲಿ ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ರೈತರು ತಮ್ಮ ರಾಸುಗಳನ್ನು ಕಟ್ಟಲು ಆರಂಭಿಸಿದ್ದಾರೆ.ತಾಲ್ಲೂಕು, ಜಿಲ್ಲೆಯ ವಿವಿಧ ಭಾಗ ಅಲ್ಲದೇ ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಿಂದ ರೈತರು ತಮ್ಮ ರಾಸುಗಳೊಂದಿಗೆ ಬಂದು ವ್ಯಾಪಾರ ವಹಿವಾಟಿನಲ್ಲಿ ತೊಡಗುತ್ತಾರೆ.ಹಳ್ಳಿಕಾರ್ ಸೇರಿದಂತೆ ಹಲವು ತಳಿಯ ರಾಸುಗಳು ಸೇರುವ ಮದ್ದೂರಮ್ಮನ ದನಗಳ ಜಾತ್ರೆಗೆ ತನ್ನದೇ ಆದ ಮಹತ್ವವಿದ್ದು, ದಶಕಗಳ ಹಿಂದಿನಿಂದಲೂ ಇಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ.