
ಬಾಗಲಕೋಟೆ: ಕಳೆದ ಹದಿನೈದು ದಿನಗಳಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಯಲ್ಲಿ ಅರಿಸಿನದ ಬೆಲೆಯು ಕ್ವಿಂಟಲ್ಗೆ 6 ಸಾವಿರ ಇಳಿಕೆಯಾಗಿದೆ. ಬೆಳೆಗಾರರು ಇದರಿಂದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

j3tvkannada
ಜಿಲ್ಲೆಯ ರಬಕವಿ ಬನಹಟ್ಟಿ ಮುಧೋಳ, ತೇರದಾಳ, ಜಮಖಂಡಿ ತಾಲ್ಲೂಕಿನ 3,500 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಅರಿಸಿನ ಬೆಳೆಯಲಾಗುತ್ತದೆ. ಆದರೆ ಉತ್ಪನ್ನ ಮಾರಾಟಕ್ಕೆ ಸಾಂಗ್ಲಿಗೆ ಹೋಗಬೇಕಿದೆ. ಜಿಲ್ಲೆಯ ಮಹಾಲಿಂಗಪುರದಲ್ಲಿ ಮಾರುಕಟ್ಟೆ ಸ್ಥಾಪಿಸುವ ಪ್ರಯತ್ನ ನಡೆದರೂ ಫಲಪ್ರದವಾಗಿಲ್ಲ. ಎ ಗ್ರೇಡ್ ಅರಿಸಿನಕ್ಕೆ ಹದಿನೈದು ದಿನಗಳ ಹಿಂದೆ ಪ್ರತಿ ಕ್ವಿಂಟಲ್ಗೆ 19,800 ಧಾರಣೆ ಇತ್ತು. ಈಗ 14 ಸಾವಿರದ ಆಸುಪಾಸಿನಲ್ಲಿದೆ. ಘಟ್ಟಾ ಅರಿಸಿನ ಬೆಲೆಯು ಪ್ರತಿ ಕ್ವಿಂಟಲ್ಗೆ 13 ಸಾವಿರ ಇದ್ದರೆ. ಖಣಿ ಅರಿಸಿನದ ಬೆಲೆ 10 ಸಾವಿರಕ್ಕೆ ಇಳಿಕೆಯಾಗಿದೆ. ವಿವಿಧ ಬಗೆಯ ಅರಿಸಿನದ ಬೆಲೆ ಇಳಿಕೆಯಾಗುತ್ತಲೇ ಸಾಗಿದೆ. ಔಷಧ ರಸಗೊಬ್ಬರ ಕೂಲಿ ಕಾರ್ಮಿಕರ ವೆಚ್ಚ ಹೆಚ್ಚಾಗಿದೆ. ಮೊದಲ ಬಾರಿ ಬೆಳೆದಾಗ ಪ್ರತಿ ಎಕರೆಗೆ ಅಂದಾಜು 1 ಲಕ್ಷಕ್ಕೂ ಹೆಚ್ಚು ಬರುತ್ತದೆ. ಪ್ರತಿ ಕ್ವಿಂಟಲ್ಗೆ ಕನಿಷ್ಠ 15 ಸಾವಿರಕ್ಕೂ ಹೆಚ್ಚು ದೊರತರೆ ಹಾಕಿದ ಬಂಡವಾಳಕ್ಕೆ ಮೋಸವಾಗುವುದಿಲ್ಲ. ಇಲ್ಲದಿದ್ದರೆ ನಷ್ಟ ಆಗುತ್ತದೆ. ಕಳೆದ ಮೂರು ವರ್ಷಗಳಿಂದ ಅರಿಸಿನಕ್ಕೆ ಉತ್ತಮ ಬೆಲೆ ದೊರೆಯುತ್ತಿಲ್ಲ ಎನ್ನುತ್ತಾರೆ.