
ಹಾಸನ: ಭಂಡಾರ ಬಸದಿಯ ಚವೀಸ ತೀರ್ಥಂಕರರ ಸನ್ನಿಧಿಯಲ್ಲಿ ನಡೆಯುತ್ತಿರುವ ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹರಥೋತ್ಸವದ ಪ್ರಯುಕ್ತ ಜಿನ ಭಗವಂತರ ಜನ್ಮ ಕಲ್ಯಾಣ, ಜನ್ಮಾಭಿಷೇಕದ ಸಕಲ ಧಾರ್ಮಿಕ ವಿಧಿ ವಿಧಾನಗಳನ್ನು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು.

j3tvkannada
ಭಂಡಾರ ಬಸದಿಯ ಸಭಾ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ನೇಮಿನಾಥ ತೀರ್ಥಂಕರರ ಸನ್ನಿಧಿಯ ಎಡ-ಬಲ ಭಾಗದಲ್ಲಿ ಗೋಮೆದ ಯಕ್ಷ ಅಧಿದೇವತೆ ಕೂಷ್ಮಾಂಡಿನಿ ದೇವಿಯರು ವಿರಾಜಮಾನರಾಗಿದ್ದರು. ಅಷ್ಟ ಕನ್ನಿಕೆಯರು, ಅಷ್ಟ ಮಂಗಲಗಳನ್ನು ದೇವರ ಸನ್ನಿಧಿಗೆ ಅರ್ಪಿಸಿದಾಗ, ಪುರೋಹಿತರು ಅಕ್ಷತೆ, ಪುಷ್ಪ, ಲವಂಗಗಳನ್ನು ಸಮರ್ಪಿಸಿದರು. ಘಂಟಾ ನಾದ, ಮಂಗಲವಾದ್ಯಗಳ ಸೇವೆ ನಡೆಯಿತು. ಜಿನ ಬಾಲಕನನ್ನು ಆನೆಯ ವಾಹನದ ಮೇಲೆ ಪ್ರತಿಷ್ಠಾಪಿಸಿ, ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಪಾಂಡುಕ ಶಿಲೆಯಲ್ಲಿ ತೀರ್ಥಂಕರರನ್ನು ಪ್ರತಿಷ್ಠಾಪಿಸಿ 108 ಮಂಗಲ ಕಲಶ ರಜತದ ಚತುಷೋನ ಕಲಶ, ಶಾಂತಿ ಕಲಶಗಳಿಂದ ಮತ್ತು ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.